ವೀರಪ್ಪನ್ ಭಯ: ವಿದೇಶಿ ಪ್ರವಾಸಿ-ಗಣ್ಯರಿಗೆ ನೀತಿಸಂಹಿತೆ ಜಾರಿ
ವೀರಪ್ಪನ್
ಭಯ:
ವಿದೇಶಿ
ಪ್ರವಾಸಿ-ಗಣ್ಯರಿಗೆ
ನೀತಿಸಂಹಿತೆ
ಜಾರಿ
ಅರಣ್ಯ
ಪ್ರದೇಶಗಳ
ಅತಿಥಿ
ಗೃಹ-
ಜಂಗಲ್
ಲಾಡ್ಜ್ಗಳಿಗೆ
ಪ್ರವೇಶ
ನಿರ್ಬಂಧ
ಮೈಸೂರು ಜಿಲ್ಲೆಯ ಸುಂಕದಕಟ್ಟೆಯಲ್ಲಿನ ಅರಣ್ಯ ಪ್ರದೇಶದ ಅತಿಥಿ ಗೃಹಗಳು ಹಾಗೂ ಅರಣ್ಯಕ್ಕೆ ಹೊಂದಿಕೊಂಡ ಇತರ ಪ್ರದೇಶಗಳ ಜಂಗಲ್ ಲಾಡ್ಜ್ಗಳಲ್ಲಿ ವಿದೇಶಿ ಪ್ರವಾಸಿಗರು ಹಾಗೂ ಗಣ್ಯ ವ್ಯಕ್ತಿಗಳಿಗೆ ಆಗಸ್ಟ್ 17ರವರೆಗೆ ನಿರ್ಬಂಧ ಹೇರಲಾಗಿದೆ. ಒಂದುವೇಳೆ ಈ ಪ್ರದೇಶಗಳಿಗೆ ಭೇಟಿ ಕೊಡುವುದು ಅನಿವಾರ್ಯವಾದರೆ, ಎಸ್ಟಿಎಫ್ ಪೊಲೀಸರ ಪೂರ್ವಾನುಮತಿ ಪಡೆಯುವುದು ಅಗತ್ಯ.
ಮೈಸೂರಿನ ಪೊಲೀಸ್ ಅಧೀಕ್ಷಕರು ಡೆಪ್ಯೂಟಿ ಕಮೀಷನರ್ ಜಿ.ಕುಮಾರ್ ನಾಯಕ್ ಅವರಿಗೆ ಪತ್ರ ಬರೆದಿದ್ದು , ಈ ಪತ್ರದ ಪ್ರಕಾರ- ಎಸ್ಟಿಎಫ್ನಿಂದ ಬಂದ ಮಾಹಿತಿ ಮೇರೆಗೆ ವೀರಪ್ಪನ್ ಮತ್ತೆ ತನ್ನ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ. ಆ ಕಾರಣದಿಂದ ಆಗಸ್ಟ್ 17ರವರೆಗೆ ವಿದೇಶಿ ಪ್ರವಾಸಿಗರಿಗೆ ಹಾಗೂ ಅತಿ ಗಣ್ಯರಿಗೆ ಅರಣ್ಯ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸುವುದು ಅನಿವಾರ್ಯ. ಪೊಲೀಸ್ ಅಧೀಕ್ಷಕರ ಪತ್ರದ ಹಿನ್ನೆಲೆಯಲ್ಲಿ ಜುಲೈ 17ರಿಂದ ಅನ್ವಯವಾಗುವಂತೆ ಆಯ್ದ ಪ್ರದೇಶಗಳಲ್ಲಿ 1 ತಿಂಗಳ ಕಾಲ ವಿದೇಶಿ ಪ್ರವಾಸಿಗರು ಹಾಗೂ ಅತಿ ಗಣ್ಯ ವ್ಯಕ್ತಿಗಳಿಗೆ ಪ್ರವೇಶವನ್ನು ನಿರಾಕರಿಸಿ ಡೆಪ್ಯುಟಿ ಕಮೀಷನರ್ ಆದೇಶ ಹೊರಡಿಸಿದ್ದಾರೆ.
ಬಂಡೀಪುರ ಅರಣ್ಯ ಪ್ರದೇಶ ಕೂಡ ವೀರಪ್ಪನ್ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದು ಪೊಲೀಸರು ಶಂಕಿಸಿದ್ದು , ಈ ಪ್ರದೇಶದಲ್ಲಿ ಪ್ರತಿಯಾಬ್ಬರಿಗೂ ರಕ್ಷಣೆ ನೀಡುವುದು ಅಸಾಧ್ಯ ಎಂದು ಮೈಸೂರಿನ ಪೊಲೀಸ್ ಅಧೀಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್