ಇದೆಂಥ ದರಿದ್ರ ಬೆಂಗಳೂರು ರೀ- ವಾರ್ಟನ್ ಸ್ಕೂಲ್ ಮೇಷ್ಟ್ರು
ಇದೆಂಥ ದರಿದ್ರ ಬೆಂಗಳೂರು ರೀ- ವಾರ್ಟನ್ ಸ್ಕೂಲ್ ಮೇಷ್ಟ್ರು
ಎರಿಕ್ ಕೆ. ಕ್ಲೆಮನ್ಸ್ಗೂ ಬೆಂಗಳೂರಿನ ಮೂಲಭೂತ ಸೌಕರ್ಯದ ಬಗ್ಗೆ ಬೇಸರ
ವ್ಯಾಪಾರದ ಎರವಲು ಸೇವೆಯ ಬಗ್ಗೆ ಪುಸ್ತಕ ಬರೆಯುತ್ತಿರುವ ಕ್ಲೆಮನ್ಸ್ ಬೆಂಗಳೂರು ಪ್ರವಾಸದಲ್ಲಿದ್ದಾರೆ. ಅವರು ಹೇಳುತ್ತಾರೆ-
- ಭಾರತದ ಎಂಜಿನಿಯರುಗಳನ್ನು ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ. ಇಲ್ಲಿ ಪ್ರತಿಭೆ ಇದೆ. ಅದಕ್ಕೆ ತಕ್ಕಂಥ ಮೂಲಭೂತ ಸೌಕರ್ಯ ಇಲ್ಲ.
- ಭಾರತೀಯರ ವ್ಯಾಪಾರಕ್ಕೆ ನ್ಯೂಜೆರ್ಸಿ ಮಸೂದೆಯಿಂದ ಏನೇನೂ ತೊಂದರೆಯಾಗುತ್ತಿಲ್ಲ. ಇಲ್ಲಿನ ವಿಳಂಬ ನೀತಿಗಳೇ ತೊಂದರೆಗೆ ಮುಖ್ಯ ಕಾರಣ.
- Immediate ಎಂಬ ಪದಕ್ಕೆ ಇಲ್ಲಿ ಅರ್ಥವೇ ಇಲ್ಲ. ಈಗಲೇ ಇಂತಾ ಕೆಲಸ ಆಗಬೇಕು ಅಂದರೆ, ಒಂದು ವಾರ ಅಂತ ರ್ಥ ಮಾಡ್ಕೋತಾರೆ.
- ಭಾರತದ ವಿಮಾನ ನಿಲ್ದಾಣಗಳನ್ನು ನೋಡಿದರೆ ನನಗೆ ಕಾಫ್ಕನ ಕಾದಂಬರಿಗಳು ನೆನಪಾಗುತ್ತವೆ.
- ಜುಲೈ 22ನೇ ತಾರೀಕು ಸಾಯಂಕಾಲ 5 ಗಂಟೆಯಿಂದ 5.35ರ ಸಮಯದಲ್ಲಿ 10 ಸಲ ಕರೆಂಟ್ ಹೋಗಿದೆ. ಇಂಥಾ ಊರಲ್ಲಿ ಹೈ ಪವರ್ ಎಂಜಿನಿಯರಿಂಗ್ ಉಪಕರಣಗಳನ್ನು ತಯಾರು ಮಾಡೋಕೆ ಹೇಗೆ ಸಾಧ್ಯ?
- ಇಲ್ಲಿ ಫೈವ್ ಸ್ಟಾರ್ ಹೊಟೇಲ್ಗಳಲ್ಲಿ 2 ಸ್ಟಾರ್ ಹೊಟೇಲುಗಳಲ್ಲಿ ಕೆಲಸ ಮಾಡಲೂ ಲಾಯಕ್ಕಿಲ್ಲದ ಸಿಬ್ಬಂದಿ ಇರುತ್ತಾರೆ.
ಮುಖಪುಟ / ವಾರ್ತೆಗಳು












Click it and Unblock the Notifications