ಬಯೋ ಡೈವರ್ಸಿಟಿ ಪಾರ್ಕ್ ಯಾಕೆ ಇನ್ನೂ ರೆಡಿಯಾಗಿಲ್ಲ ?
ಬಯೋ ಡೈವರ್ಸಿಟಿ ಪಾರ್ಕ್ ಯಾಕೆ ಇನ್ನೂ ರೆಡಿಯಾಗಿಲ್ಲ ?
ವರ್ಷ ತುಂಬಿದರೂ ತೆವಳುತ್ತಿರುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
4.8 ಕೋಟಿ ರೂಪಾಯಿ ವೆಚ್ಚದಲ್ಲಿ ಜಯಪ್ರಕಾಶ್ ನಾರಾಯಣ್ ಬಯೋಡೈವರ್ಸಿಟಿ ಪಾರ್ಕ್ ನಿರ್ಮಿಸಲು ಸರಕಾರ ಉದ್ದೇಶಿಸಿತ್ತು. ಆದರೆ ಈ ಯೋಜನೆಯ ಘೋಷಣೆಯಾಗಿ ವರ್ಷ ಕಳೆದರೂ ಪಾರ್ಕ್ ನಿರ್ಮಾಣದ ಕಾಮಗಾರಿ ಮುಗಿದಿಲ್ಲ .
ಮತ್ತಿಕೆರೆಯಲ್ಲಿ ಬಯೋಡೈವರ್ಸಿಟಿ ಪಾರ್ಕ್ ಸ್ಥಾಪಿಸುವ ಪ್ರಸ್ತಾಪದ ಬಗ್ಗೆ ಸರಕಾರ ಮಾತೆತ್ತುತ್ತಿಲ್ಲ. ಜೀವ ವೈವಿಧ್ಯದ ರಕ್ಷಣೆ ಹಾಗೂ ಪ್ರವಾಸಿಗಳನ್ನು ಆಕರ್ಷಿಸುವ ಎರಡು ಉದ್ದೇಶಗಳೊಂದಿಗೆ ಈ ಪಾರ್ಕ್ ಸ್ಥಾಪಿಸುವ ಉದ್ದೇಶ ಹೊಂದಲಾಗಿತ್ತು.
ಪಾರ್ಕ್ಗಾಗಿ 83 ಎಕರೆ ಪ್ರದೇಶ ಕೊಳ್ಳುವ ವೆಚ್ಚದ ಶೇ.50ರಷ್ಟನ್ನು ರಾಜ್ಯ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನೀಡಿದೆ. ಬೆಂಗಳೂರು ನಗರ ಪಾಲಿಕೆಯು ಬಯೋಡೈವರ್ಸಿಟಿ ಪಾರ್ಕ್ ನ ಕೆಲಸದ ಬಗ್ಗೆ ನಿಗಮಕ್ಕೆ ಪ್ರತಿ ತಿಂಗಳು ವರದಿ ಸಲ್ಲಿಸುತ್ತಿದೆ. ಮೊದಲ ಹಂತದ ಕಾಮಗಾರಿ ಮುಗಿದಿರುವುದಾಗಿ ವರದಿ ತಿಳಿಸಿದೆ ಎಂದು ನಿಗಮದ ಇಂಜಿನಿಯರಿಂಗ್ ಸಲಹಾಗಾರ ಚಂದ್ರಶೇಖರ್ ಹೇಳಿದ್ದಾರೆ.
ಕಾಂಪೌಂಡ್, ಪ್ರವಾಸಿಗರಿಗಾಗಿ ಕಾಲುದಾರಿಯಂಥ ಪುಟಾಣಿ ಕೆಲಸಗಳು ನಡೆದಿರುವುದೂ ಖರೆ. ಮುಖ್ಯ ಕೆಲಸಗಳೆಲ್ಲ ಹಾಗಾಗೇ ಬಾಕಿಯಿವೆ. ಈ ಬಗ್ಗೆ ಬಿಸಿಸಿ ಏನು ಹೇಳುತ್ತದೆ ?
ಬಯೋಡೈವರ್ಸಿಟಿ ಪಾರ್ಕ್ನಲ್ಲಿ ಪರಿಸರದ ಬಗ್ಗೆ ಸಲಹೆ ನೀಡುವುದಕ್ಕೆ ಪರಿಸರವಾದಿ ಅ. ನ. ಯಲ್ಲಪ್ಪ ರೆಡ್ಡಿಯವರನ್ನು ನೇಮಿಸಲಾಗಿದೆ. ಅವರು ಗಿಡಗಳ ಆಯ್ಕೆಯನ್ನು ಗಮನಿಸುತ್ತಾರೆ. ಈ ವರ್ಷದ ಕೊನೆಗೆ ಬಯೋಡೈವರ್ಸಿಟಿ ಪಾರ್ಕ್ ರೆಡಿಯಾಗುತ್ತದೆ ಎಂಬುದು ಬಿಸಿಸಿ ನೀಡುವ ಭರವಸೆ.
ಕಾಮಗಾರಿಯ ವೇಗವನ್ನು ಪರಿಶೀಲಿಸದೇ ಇದ್ದಲ್ಲಿ ಈ ಭರವಸೆಯನ್ನು ನಂಬಬಹುದು !
(ಇನ್ಫೋ ವಾರ್ತೆ)
ಮುಖಪುಟ / ಐಟಿ - ಬಿಟಿ












Click it and Unblock the Notifications