ಸಾಂಕೇತಿಕ ಪೂಜೆ : ಕೋರ್ಟು ನಿರ್ದೇಶನ ದುರದೃಷ್ಟಕರ- ಆರ್ಎಸ್ಎಸ್
ಬೆಂಗಳೂರು : ಅಯೋಧ್ಯೆಯಲ್ಲಿ ಸಾಂಕೇತಿಕ ಪೂಜೆಗೆ ಅವಕಾಶ ಮಾಡಿಕೊಡುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿರುವ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ತೀವ್ರ ನಿರಾಶೆ ವ್ಯಕ್ತಪಡಿಸಿದೆ.
ನಾವು ನಿರಾಶರಾಗಿದ್ದೇವೆ. ಸುಪ್ರಿಂಕೋರ್ಟ್ನ ನಿರ್ದೇಶನ ದುರದೃಷ್ಟಕರ ಎಂದು ಆರ್ಎಸ್ಎಸ್ ವಕ್ತಾರ ಎಂ.ಜಿ.ವೈದ್ಯ ಬುಧವಾರ ನಗರದ ಹೊರ ವಲಯದ ಚನ್ನೇನಹಳ್ಳಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮಾರ್ಚ್ 15 ರಿಂದ ಪ್ರಾರಂಭವಾಗುವ ಅಖಿಲ ಭಾರತೀಯ ಪ್ರತಿನಿಧಿ ಸಭಾ ಅಂಗವಾಗಿ ಆರ್ಎಸ್ಎಸ್ ಮುಖ್ಯಸ್ಥ ಕೆ.ಸಿ. ಸುದರ್ಶನ್ ಅವರು ಬೆಂಗಳೂರಿನಲ್ಲಿ ಇದ್ದಾರಾದರೂ, ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಲು ಅವರು ಸುದ್ದಿಗಾರರಿಗೆ ಅಲಭ್ಯ .
ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಆರ್ಎಸ್ಎಸ್ನ ಉನ್ನತ ನಾಯಕರು ಭಾಗವಹಿಸುತ್ತಿದ್ದು , ರಾಮ ಮಂದಿರ ನಿರ್ಮಾಣ ಸೇರಿದಂತೆ ವಿವಿಧ ಪ್ರಮುಖ ವಿಷಯಗಳ ಕುರಿತು ಸಭಾ ನಿರ್ಣಯಗಳನ್ನು ಕೈಗೊಳ್ಳುತ್ತದೆಂದು ಸಂಘ ಪರಿವಾರ ನಿರೀಕ್ಷಿಸಿದೆ.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications