ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಿಪಟೂರು : ಸಂಕ್ರಾಂತಿ ರಾತ್ರಿ ದರೋಡೆ, ಮನೆ ಮಂದಿ ಮೇಲೆ ಹಲ್ಲೆ
ಬೆಂಗಳೂರು: ತುಮಕೂರು ಜಿಲ್ಲೆ ಯ ತಿಪಟೂರಿಗೆ ಸಮೀಪದ ಮನೆಯಾಂದಕ್ಕೆ ಸಂಕ್ರಾಂತಿ ಹಬ್ಬದ ರಾತ್ರಿ (ಸೋಮವಾರ, ಜ.14) ನುಗ್ಗಿರುವ ಡಕಾಯಿತರ ತಂಡ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿ ನಗ ನಗದು ದೋಚಿದ್ದಾರೆ.
1 ಲಕ್ಷ ರುಪಾಯಿ ನಗದು ಹಾಗೂ ಸುಮಾರು 50 ಸಾವಿರ ರುಪಾಯಿ ಮೌಲ್ಯದ ಅಭರಣಗಳನ್ನು ದೋಚಿರುವ ದರೋಡೆಕೋರರು, ಪ್ರತಿಭಟನೆ ವ್ಯಕ್ತಪಡಿಸಿದ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುದ್ದಿಗಾರರಿಗೆ ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಡಕಾಯಿತರ ಹಲ್ಲೆಯಲ್ಲಿ ಒಬ್ಬನಿಗೆ ಹೆಚ್ಚಿನ ಗಾಯಗಳಾಗಿದ್ದು , ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆ ಪ್ರಕರಣದ ಬಗೆಗೆ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Story first published: Tuesday, January 15, 2002, 5:30 [IST]