ಸುದ್ದಿ ಜಾಲದಲ್ಲಿ ಸಂಪಾದಕರು ಹೆಕ್ಕಿದ್ದು....
ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ: ಉಡುಪಿ ಜಿಲ್ಲಾಡಳಿತದ ಸಂಕಲ್ಪ
ಸೇಂಟ್ ಮೇರಿ ದ್ವೀಪ ಸೇರಿದಂತೆ ಹಲವು ತಾಣಗಳ ಅಭಿವೃದ್ಧಿಗೆ ಕ್ರಮ
- ಉಡುಪಿಗೆ ರೈಯ !
ಕಂಬಳದಲ್ಲಿ ಗಾಂಧಿತತ್ವ !
ಕರಾವಳಿಯ ಕಂಬಳದ ಅಂಗಳದಲ್ಲೀಗ ಪ್ರಾಣಿಹಿಂಸಾ ಪ್ರತಿಬಂಧಕ ಕಾಯ್ದೆಯ ಬಿತ್ತನೆ. ಕೋಣಗಳನ್ನು ಸಿಕ್ಕಾಪಟ್ಟೆ ಹೊಡೆಯಬಾರದು ಎಂಬುದು ಕರಾವಳಿಯ ಕಂಬಳ ಸಮಿತಿಯ ಅಪ್ಪಣೆ. ಪಾಲನೆಯಾಗುತ್ತಾ?
- ಆಚಾರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ ಸಿನಿಕರು.
ಕರ್ನಾಟಕವನ್ನು 'ಕೊಳಗೇರಿ ಮುಕ್ತ ರಾಜ್ಯ" ಮಾಡಲು ಸಂಕಲ್ಪ
ಕೊಳೆಗೇರಿ ನಿರ್ಮೂಲನಕ್ಕೆ 'ನಿರ್ಮಲ ಜ್ಯೋತಿ" ಯೋಜನೆ
- ಇಡೀ ಭಾರತವೇ ಕೊಳಗೇರಿ ಎಂದು ನಂಬಿದವರು ಇದನ್ನು ಓದುವ ಅಗತ್ಯವಿಲ್ಲ !
ಉಜಿರೆ ಕಾಲೇಜಲ್ಲಿ ಜ್ಯೋತಿಷ್ಯ ವಿಜ್ಞಾನದ ಸರ್ಟಿಫಿಕೇಟ್ ಕೋರ್ಸ್
ನಮ್ಮ ದೇಶದ ಶಾಲಾ ಕಾಲೇಜುಗಳಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಕಲಿಸಬೇಕೇ ಅಥವಾ ಬೇಡವೇ ? ಈ ಪ್ರಶ್ನೆ ರಾಷ್ಟ್ರಾದ್ಯಂತ ವ್ಯಾಪಕ ಚರ್ಚೆಗೆ ವಸ್ತುವಾಗಿತ್ತು. ಯಾರು ಏನೇ ಹೇಳಲಿ , ನಾವಂತೂ ಒಂದು ಭಾರತೀಯ ವಿದ್ಯೆಯನ್ನು ಕಲಿಸುತ್ತೇವೆ ಎನ್ನುತ್ತಿದೆ ಬೆಳ್ತಂಗಡಿಯ ಈ ಕಾಲೇಜು.
- ನಹಿಜ್ಞಾನೇನ ಸದೃಶಂ
ಕೆನರಾಬ್ಯಾಂಕೂ, ಬೆಂಗಳೂರಿನ ಬೀದಿ ನಾಯಿಯೂ.....
ಅಮೆರಿಕದಲ್ಲಿ ಸಾಕುಪ್ರಾಣಿಗಳ ಪ್ರಪಂಚ ಬಿಲಿಯನ್ ಡಾಲರ್ ಉದ್ಯಮ. ನಮ್ಮಲ್ಲೋ.. ಇಲಿಗಳ ಕಾಟವೋ ಕಾಟ ಎಂದು ಕುವೆಂಪು ಹಾಡಿನಂತೆ ಬೀದಿನಾಯಿಗಳ ಉಪಟಳವೋ ಉಪಟಳ. ಈ ನಾಯಿಕಾಟ ಹತ್ತಿಕ್ಕಲು ಇವತ್ತು ಕೆನರಾ ಬ್ಯಾಂಕು .
- ಥ್ಯಾಂಕ್ಯೂ ಪೈ ಅಂಕಲ್ಸ್
ಮನೋಮೂರ್ತಿ ಕಣ್ಣಲ್ಲಿ ಆಸ್ಕರ್!
ಅಮೆರಿಕ ಅಮೆರಿಕ, ನನ್ನ ಪ್ರೀತಿಯ ಹುಡುಗಿಯಂಥ ಹಿಟ್ ಚಿತ್ರಗಳ ಸಂಗೀತ ಸಂಯೋಜಕ . ಸಾಫ್ಟ್ವೇರ್ ತಜ್ಞ . ಈಚೆಗಷ್ಟೇ ಕ್ರಿಯಾಶೀಲ ಕನ್ನಡಿಗರೆಂದು ಸನಿವೇಲ್ನಲ್ಲಿ ಸನ್ಮಾನಿತ. ಇವತ್ತು ಇವರು ಅದೇಕೋ ಸುಮ್ಮನಿದ್ದುಬಿಟ್ಟಿದ್ದಾರೆ. ಯಾಕೆ ? ಈಗೆಲ್ಲಿದ್ದಾರೆ , ಅದೇನು ಮಾಡುತ್ತಿದ್ದಾರೆ..?
- ಹೊಸ ಸಂಗೀತಕದ ಮಟ್ಟುಗಳನ್ನು ಕಲಿಯುತ್ತಿದ್ದಾರಾ !
ಹತ್ತೇ ದಿನದಲ್ಲಿ ಸಂಸ್ಕೃತದಲ್ಲಿ ಮಾತಾಡಬೇಕೆ? ಬನ್ನಿ ಶಿಬಿರಕ್ಕೆ
ಸಂಸ್ಕೃತ ಕಬ್ಬಿಣದ ಕಡಲೆ ಏನಲ್ಲ. ಸಂಸ್ಕೃತ ಕಲಿಯುವುದು ಕಷ್ಟವೂಅಲ್ಲ. ಕೇವಲ ಹತ್ತೇ ದಿನಗಳಲ್ಲಿ ಸಂಸ್ಕೃತ ಕಲಿತು ನೀವೂ ಮಾತನಾಡಬಹುದು. ಆಶ್ಚರ್ಯಎನಿಸಿದರೂ ಇದು ಸತ್ಯ.
- ಶ್ರದ್ಧೆ , ಆಸಕ್ತಿಯಿದ್ದರೆ ಏನುಬೇಕಾದರೂ ಕಲಿಯಬಹುದು, ಸಂಸ್ಕೃೃತಾನೂ ಸಹ !
ಬಸ್ ಪ್ರಯಾಣಿಕರಿಗೆ ವಿಮೆ ಒದಗಿಸಲು ಸರ್ಕಾರದ ಚಿಂತನೆ
ಖಾಸಗಿ ವಾಹನಗಳಲ್ಲಿ ಸಂಚರಿಸದಿರಲು ಪ್ರಯಾಣಿಕರಿಗೆ ಸಚಿವರ ಕರೆ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಪಘಾತ ವಿಮಾ ಸೌಲಭ್ಯವನ್ನು ಜಾರಿಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ.
- ಕ್ಲೇಮ್ಸ್ ಸೆಟಲ್ ಆಗುವುದು ಸ್ವರ್ಗದಲ್ಲಿ ಮಾತ್ರ ತಿಳಿಯಿರಿ !
ನಾನಿನ್ನು ಸುಮ್ಮನಿರುವುದಿಲ್ಲ , ಕೋರ್ಟಿಗೆ ಹೋಗುತ್ತೇನೆ!
ಧನರಾಜ್ ಅಂಥವರಿಂದ ಉದ್ಯಮಕ್ಕೆ ಅಪಾಯ. ಆತನೊಂದಿಗೆ ಸಂಧಾನ ಸಾಧ್ಯವೇ ಇಲ್ಲ . ಏನಿದ್ದರೂ ನೇರ ಹೋರಾಟ ಎನ್ನುತ್ತಾರೆ ಉಪೇಂದ್ರ
- ಕೋರ್ಟಿನಲ್ಲಿ ಗೆದ್ದವನು ಸೋತ, ಸೋತವನು ಸತ್ತ !