ಕಂಪ್ಯೂಟರ್ ಕೊಳ್ಳಿರೋ..
ಬೆಂಗಳೂರು : ಜನತಾ ಊಟದ ಮಾದರಿಯಲ್ಲಿ ಜನ ಸಾಮಾನ್ಯರಿಗೂ ಕಂಪ್ಯೂಟರ್ ಸೌಲಭ್ಯ ಒದಗಿಸುವ ಜನತಾ ಕಂಪ್ಯೂಟರ್ ಯೋಜನೆ ಸಿದ್ಧವಾಗಿದೆ. ಜನ ಸಾಮಾನ್ಯರತ್ತ ಕಂಪ್ಯೂಟರ್ ಒಯ್ಯುವ ಈ ಯೋಜನೆ ಮುಂದಿನ ವರ್ಷದಿಂದ ಜಾರಿಗೆ ಬರುವ ನಿರೀಕ್ಷೆಯಿದೆ.
ಮ್ಯಾನುಫ್ಯಾಕ್ಚರ್ ಅಸೋಸಿಯೇಷನ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ(ಎಂಎಐಟಿ), ವಿಪ್ರೋ ಇನ್ಫೋಟೆಕ್ ಎನ್ಕೋರ್ ಸಾಫ್ಟ್ವೇರ್, ಎಚ್ಸಿಎಲ್ ಇನ್ಫೋ ಸಿಸ್ಟಮ್ಸ್ ಮತ್ತು ವಿಂಟ್ರೋನ್ ಸಂಸ್ಥೆಗಳ ಸಹಯೋಗದಲ್ಲಿ ಜನತಾ ಪಿಸಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಪ್ರಾದೇಶಿಕ ಭಾಷೆಯನ್ನು ಅಳವಡಿಸಬಹುದಾದ ಕಡಿಮೆ ಬೆಲೆಯ ಕಂಪ್ಯೂಟರ್ ತಯಾರಿಕೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಈ ಕಂಪ್ಯೂಟರ್ಗಳನ್ನು ಬೃಹತ್ ಸಂಖ್ಯೆಯಲ್ಲಿ ಸರಬರಾಜು ಮಾಡುವುದು ಈ ಯೋಜನೆಯ ಉದ್ದೇಶ ಎಂದು ಎಂಎಐಟಿಯ ನಿರ್ದೇಶಕ ವಿನ್ನೀ ಮೆಹ್ತಾ ತಿಳಿಸಿದ್ದಾರೆ.
ಮಧ್ಯಮ ವರ್ಗದವರಿಗೂ ಕಂಪ್ಯೂಟರ್ ಸೌಲಭ್ಯ
ಜನತಾ ಕಂಪ್ಯೂಟರ್ನ ಪ್ರೊಸೆಸರ್, ಇಂಟೆಲ್ 486 ನ ನಿರ್ವಹಣೆಗೆ ಸಮನಾಗಿರುತ್ತದೆ. ಈ ಕಂಪ್ಯೂಟರ್ಗಳನ್ನು ಪ್ರಾದೇಶಿಕ ಕಂಪ್ಯೂಟರ್ ಉತ್ಪಾದಕರೂ ಉತ್ಪಾದಿಸಲು ಅನುಕೂಲವಾಗುವಂತೆ ತಯಾರಿಸಲಾಗುವುದು. ಸುಮಾರು ಒಂದೂವರೆ ಅಥವಾ 2 ಕೋಟಿ ರೂಪಾಯಿ ವೆಚ್ಚದಲ್ಲಿ 2.5 ಲಕ್ಷ ಯೂನಿಟ್ಗಳನ್ನು ತಯಾರಿಸುವ ಯೋಜನೆಯಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಈ ಯೋಜನೆಗೆ ನೆರವು ಸಿಗುವ ಭರವಸೆ ಸಿಕ್ಕಿದೆ. ಆದರೆ ಈ ಬಗೆಗಿನ ಮಾದರಿ ಕಂಪ್ಯೂಟರ್ಗಳನ್ನು ಇನ್ನು ತಯಾರಿಸಬೇಕಾಗಿದೆಯಷ್ಟೇ.
ದೇಶದಲ್ಲಿ ಕಂಪ್ಯೂಟರ್ ಮಾರಾಟ ದರದಲ್ಲಿಯೂ ಈ ವರ್ಷ ಅಂತಹ ಪ್ರಗತಿಯೇನೂ ಕಂಡು ಬಂದಿಲ್ಲ. ಭಾರತದಲ್ಲಿ ಕಂಪ್ಯೂಟರ್ ಕೊಳ್ಳುವವರು ಮೇಲ್ಮಧ್ಯಮ ವರ್ಗದವರು ಅಥವಾ ಶ್ರೀಮಂತರು. ಮಧ್ಯಮವರ್ಗದವರು ಕಂಪ್ಯೂಟರ್ ಕೊಳ್ಳುವಂತಾಗಬೇಕಾದರೆ ಕಂಪ್ಯೂಟರ್ ದರ ಮತ್ತು ಪ್ರಾದೇಶಿಕ ಭಾಷೆಯ ಅಳವಡಿಕೆಯ ಅಗತ್ಯವಿದೆ ಎಂದು ಮೆಹ್ತಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಯೋಜನೆಗೆ ಪೂರಕವಾಗಿ ಎಂಎಐಟಿಯು, ಬಜೆಟ್ ಸಲಹಾ ಪಟ್ಟಿಯಾಂದನ್ನು ಕೇಂದ್ರ ಹಣಕಾಸು ಇಲಾಖೆಗೆ ಕಳುಹಿಸಿದೆ. ಈ ಸಲಹೆಗಳ ಪ್ರಕಾರ-
- ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಜೆಟ್ನ ಶೇ 3ರಷ್ಟು ಹಣವನ್ನು ಐಟಿಯಲ್ಲಿ ತೊಡಗಿಸುವ ಬಗ್ಗೆ ಖಾತರಿ ನೀಡುವುದು
- ಪಿಸಿ ಕೊಳ್ಳಲು ಭವಿಷ್ಯ ನಿಧಿಯ ಹಣ ಉಪಯೋಗಿಸಿಕೊಳ್ಳಲು ಅವಕಾಶ
- ಶಿಕ್ಷಣ ಸಂಸ್ಥೆಗಳಿಗೆ ಮಾರಾಟ ಮಾಡುವ ಐಟಿ ಉಪಕರಣಗಳಿಗೆ ಪ್ರಾದೇಶಿಕ ತೆರಿಗೆ ವಿನಾಯಿತಿ
- ಐಟಿ ಉತ್ಪನ್ನಗಳ ಆಮದು ಮತ್ತು ರಫ್ತಿಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ನೀಡಲು ರಾಷ್ಟ್ರೀಯ ದ್ವಿಪಕ್ಷೀಯ ಒಪ್ಪಂದಗಳಿಗೆ ತಿದ್ದುಪಡಿ ತರುವುದು
- ಐಟಿ ಕ್ಷೇತ್ರದಲ್ಲಿ ಸಾಕಷ್ಟು ಅರ್ ಆ್ಯಂಡ್ ಡಿಗೆ ಅವಕಾಶ ನೀಡುವುದು.
ಜನತಾ ಕಂಪ್ಯೂಟರ್ ಯೋಜನೆ- ದೇವರಾಜ ಅರಸು ಸಂಪುಟದಲ್ಲಿ ಆಹಾರ ಸಚಿವರಾಗಿದ್ದ ಎಚ್.ಜಿ.ರಾಮುಲು ಅವರು ಜಾರಿಗೆ ತಂದಿದ್ದ ಜನತಾ ಊಟದ ಯೋಜನೆಯನ್ನು ನೆನಪಿಗೆ ತರುತ್ತದೆ. ಹೊಟೇಲ್ಗಳಲ್ಲಿ ಊಟ ದುಬಾರಿ. ಜನ ಸಾಮಾನ್ಯರಿಗೆ ಹೊಟೇಲ್ ಊಟ ಕೈಗೆಟುಕುವುದಿಲ್ಲ ಎನ್ನುವ ಕಾಳಜಿಯಿಂದ ರಾಮುಲು ಅವರು ಜನತಾ ಊಟ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯ ಪ್ರಕಾರ ಎಲ್ಲ ಹೊಟೇಲ್ಗಳಲ್ಲೂ ಊಟದ ದರ ಏಕರೂಪಯಾಗಿರಬೇಕು.
ಹೊಟೇಲ್ಗಳೇನೊ ಜನತಾ ಊಟ ಯೋಜನೆ ಜಾರಿಗೆ ತಂದವು. ಆದರೆ, ಗುಣಮಟ್ಟ ಪಾತಾಳಕ್ಕಿಳಿಯಿತು. ಕಾಸಿಗೆ ತಕ್ಕ ಕಜ್ಜಾಯ ಅನ್ನುವಂತೆ ಅನ್ನ , ಸಾಂಬಾರ್, ಮಜ್ಜಿಗೆ.. ಜನರಿಗೆ ಬೇಜಾರು. ಪರಿಣಾಮ, ಬಹುತೇಕ ಸರ್ಕಾರಿ ಯೋಜನೆಗಳಂತೆ ಜನತಾ ಊಟ ಯೋಜನೆ ಇತಿಹಾಸದ ಕಸದಬುಟ್ಟಿಗೆ. ಇವತ್ತು ಜನತಾ ಕಂಪ್ಯುೂಟರ್ ಯೋಜನೆ ಎಂದಾಗ ಜನತಾ ಊಟ ಯೋಜನೆ ತಟ್ಟನೆ ನೆನಪಿಗೆ ಬರುತ್ತದೆ. ಊಟದ ಪಾಡು ಕಂಪ್ಯೂಟರ್ಗೆ ಬರದಿರಲಿ ಎಂದು ಆಶಿಸೋಣ!
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications