ಇನ್ನೊಬ್ಬ ಗೋಪಾಲಪ್ಪ ? 1 ಕೋಟಿ ರು.ಬ್ಯಾಂಕ್ಹಣ ಗುಳುಂ
ಬೆಂಗಳೂರು : ಕಳೆದ ನಾಲ್ಕು ವರ್ಷಗಳಿಂದ ಐಸಿಐಸಿಐ ಬ್ಯಾಂಕಿನ ಹಣ 1 ಕೋಟಿ 3 ಲಕ್ಷ 29 ಸಾವಿರದ 617 ರುಪಾಯಿಯನ್ನು ಗುಳುಂ ಮಾಡಿದ್ದಾನೆ ಎಂಬ ಆರೋಪದ ಮೇಲೆ ವಿ.ಎಸ್.ವಿವೇಕಾನಂದ ಎಂಬಾತನನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಈತ ಬ್ಯಾಂಕಿನ ಕಂಟೋನ್ಮೆಂಟ್ ಶಾಖೆಯ ಸಹಾಯಕ ಮೇನೇಜರ್. ಬ್ಯಾಂಕ್ ಆಫ್ ಮಧುರಾದಲ್ಲಿ ಕೆಲಸ ಮಾಡಿದ ಅನುಭವವಿದೆ. ಡಿ.ರವಿಕುಮಾರ್, ನಾಗೇಶ್ ಹಾಗೂ ಎಂ.ರವಿ ಎನ್ನುವವರ ಖಾತೆಗಳಿಂದ ಹಣವನ್ನು ಬೇಕಾದಾಗ ತೆಗೆದು, ಬ್ಯಾಂಕ್ನ ಕ್ಲಿಯರಿಂಗ್ ಅಕೌಂಟಿನಿಂದ ತೆಗೆದ ಹಣವನ್ನು ಭರ್ತಿ ಮಾಡುತ್ತಾ ಬಂದಿದ್ದಾನೆ. ಈ ಮೂವರ ಖಾತೆಗಳಿಂದ ಚೆಕ್ ಮೂಲಕ ತನಗೆ ಬೇಕಾದಾಗಲೆಲ್ಲಾ ಹಣವನ್ನು ತೆಗೆದಿದ್ದಾನೆ. ಕಂಪ್ಯೂಟರಲ್ಲಿ ತಪ್ಪು ಮಾಹಿತಿ ದಾಖಲಿಸಿ, ಯಾರ್ಯಾರದೋ ಚೆಕ್ಕುಗಳ ಉಪಯೋಗಿಸಿ ಅವ್ಯವಹಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮಾರ್ಚ್ನಲ್ಲಿ ಐಸಿಐಸಿಐ ಬ್ಯಾಂಕ್ ಜತೆ ಬ್ಯಾಂಕ್ ಆಫ್ ಮಧುರಾ ವಿಲೀನವಾಯಿತು. ಆ ಸಮಯದಲ್ಲಿ ಎಲ್ಲಾ ಖಾತೆಗಳ ಲೆಕ್ಕವನ್ನು ಪುನರ್ ಪರಿಶೀಲಿಸಿದಾಗ ಬ್ಯಾಂಕ್ನ ಕ್ಲಿಯರಿಂಗ್ ಖಾತೆಯಲ್ಲಿ ಹಣ ಖೋತಾ ಆಗಿರುವುದು ಗೊತ್ತಾಗಿದೆ. ಬ್ಯಾಂಕ್ ಮೇನೇಜರ್ ಸೈಯದ್ ಅನೀಸ್ ಅಹಮದ್ ನ.23ರಂದು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದರು.
ಕೊಸರು : 1997ರಿಂದ ಬ್ಯಾಂಕ್ ಮೇನೇಜರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಬಂದಿರುವ ಈತನಿಗೆ ಹರ್ಷದ್ ಮೆಹ್ತಾ ಮಾದರಿಯೋ ಅಥವಾ ದುಪ್ಪಟ್ಟು ಬಡ್ಡಿಯ ಸ್ಕೀಮಿನ ನೆಪವೊಡ್ಡಿ ದಶಕಗಳ ಹಿಂದೆ ಭಾರೀ ಹಣ ದೋಚಿದ್ದ ಗೋಪಾಲಪ್ಪನ ಮಾದರಿಯೋ?
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications