ಕರ್ನಾಟಕಕ್ಕೆ ವಿದ್ಯುತ್ ಮಾತ್ರ ದುಬಾರಿ, ತಮಿಳುನಾಡಿಗೋ ಎಲ್ಲಾ ದುಬಾರಿ
ಚೆನ್ನೈ : ಕರ್ನಾಟಕದ ಜನತೆಗೆ ಸರ್ಕಾರದ ದೀಪಾವಳಿ ನಂತರದ ಕೊಡುಗೆ ವಿದ್ಯುತ್ ದರ ಏರಿಕೆ. ಅದು ಪ್ರತಿಶತ 13ರಿಂದ 25ರಷ್ಟಾಗಬಹುದು. ಆದರೆ, ತಮಿಳುನಾಡಿನಲ್ಲಿ ಎಣ್ಣೆ, ಅಕ್ಕಿ, ಬಸ್ಸು, ವಿದ್ಯುತ್ ಎಲ್ಲದರ ಬೆಲೆ ಒಂದೇ ದಿನ ಏರಿದೆ.
ಅಣ್ಣಾ ಡಿಎಂಕೆಯ ಜಯಲಲಿತಾ ಕೃಪಾ ಪೋಷಿತ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸರ್ಕಾರ ಬೊಕ್ಕಸದ ನಷ್ಟ ಭರಿಸಲು ಇಟ್ಟಿರುವ ಹೆಜ್ಜೆಯಿದು. ಸಾಲದ್ದಕ್ಕೆ ಸರ್ಕಾರಿ ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತ ಮಾಡಲು ಸ್ವಯಂ ನಿವೃತ್ತಿ ಯೋಜನೆಯನ್ನೂ ಜಾರಿಗೆ ತರಲಿದ್ದಾರೆ.
ಪ್ರತಿ ಯೂನಿಟ್ಗೆ 75 ಪೈಸೆ ವಿದ್ಯುತ್ ದರ ಇರುವ ಕಡೆ ಡೆಸೆಂಬರ್ 1ನೇ ತಾರೀಖಿನಿಂದ 1 ರುಪಾಯಿ ಕಟ್ಟಬೇಕು. ಕನಿಷ್ಠ 1.50 ರುಪಾಯಿ ಇರುವ ಬಸ್ ಟಿಕೇಟು ದರವನ್ನು 2 ರುಪಾಯಿಗೆ ಏರಿಸಲಾಗಿದೆ. ದೂರದೂರಿನ ಬಸ್ಸುಗಳ ಪ್ರತಿ ಕಿಲೋಮೀಟರ್ ದರವನ್ನೂ ಏರಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಅಕ್ಕಿಯ ಪರಿಷ್ಕೃತ ದರ- ಬಡತನ ರೇಖೆಯಿಂದ ಕೆಳಗಿರುವವರಿಗೆ ಪ್ರತಿ ಕಿಲೋಗೆ 3.50 ರುಪಾಯಿ. ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ಪ್ರತಿ ಕಿಲೋಗೆ 9 ರುಪಾಯಿ. ಸಕ್ಕರೆ : ಪ್ರತಿ ಕಿಲೋಗೆ 13.25 ರುಪಾಯಿ.
ಅಷ್ಟೇ ಅಲ್ಲ ಹಾಲು, ಪೆಟ್ರೋಲು, ಇತರೆ ದಿನಸಿ, ಹತ್ತಿ, ಕಂಪ್ಯೂಟರ್ ಸಾಫ್ಟ್ವೇರ್ ಎಲ್ಲದರ ಮೇಲೂ ತೆರಿಗೆ. ಅಂದಮೇಲೆ, ಇವುಗಳ ದರವೂ ತಂತಾನೇ ಏರಲಿದೆ. ಸರ್ಕಾರಿ ಸಿಬ್ಬಂದಿ ಸಂಖ್ಯೆಯಲ್ಲಿ ಪ್ರತಿಶತ 30ರಷ್ಟು ಕಡಿತ ಮಾಡುವುದಕ್ಕಾಗಿ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಹೊಸ ನೇಮಕಾತಿಗಳನ್ನೂ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳ ವಿವಿಧ ಶುಲ್ಕಗಳೂ ಏರಿವೆ. ಮೆಡಿಕಲ್ ಸೀಟುಗಳ ಸಂಖ್ಯೆ ಹೆಚ್ಚಿಸಿ, ಅನಿವಾಸಿ ಭಾರತೀಯರಿಗೆ ಪ್ರತಿಶತ 50ರಷ್ಟು ಪೇಮೆಂಟ್ ಸೀಟುಗಳನ್ನು ಮೀಸಲಿಡುವ ಮಹಾ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications