ತ್ವರಿತ ಅಲರ್ಟ್ ಗಳಿಗಾಗಿ
For Daily Alerts
13 ಸಾವಿರ ಸರ್ಕಾರಿ ನೌಕರರ ಕೆಲಸಕ್ಕೆ ತಕ್ಷಣವೇ ಕುತ್ತಿಲ್ಲ- ಚಂದ್ರೇಗೌಡ
ಬೆಂಗಳೂರು : ಗ್ರಾಮೀಣ ಕೃಪಾಂಕ ಆಧಾರದ ಮೇಲೆ ನೇಮಿಸಿಕೊಂಡಿರುವ 13,560 ಸರ್ಕಾರಿ ಸಿಬ್ಬಂದಿಯ ಕೆಲಸಕ್ಕೆ ತಕ್ಷಣವೇ ಕುತ್ತೇನೂ ಇಲ್ಲ.
ಈ ನೇಮಕ ಸರಿಯಲ್ಲ, ಅವರನ್ನೆಲ್ಲಾ ಕೆಲಸದಿಂದ ತೆಗೆದು ಹಾಕಿ ಎಂಬ ತೀರ್ಪಿಗೆ ಸುಪ್ರಿಂಕೋರ್ಟ್ ಅಂಟಿಕೊಂಡಿದೆ. ತೀರ್ಪಿನ ಮರು ಪರಿಶೀಲನೆಯ ಅರ್ಜಿಯನ್ನೂ ತಿರಸ್ಕರಿಸಿದೆ. ಹೀಗಿದ್ದೂ ತೀರ್ಪನ್ನು ಸಮಗ್ರವಾಗಿ ಅಧ್ಯಯನ ಮಾಡುವವರೆಗೆ ಯಾವುದೇ ನಿರ್ಣಯವನ್ನು ಸರ್ಕಾರ ಕೈಗೊಳ್ಳುವುದಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಕಾನೂನು ತಜ್ಞರೊಡನೆ ಮಾತುಕತೆ ನಡೆಸಿ, ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಮುಂದೇನು ಮಾಡಬೇಕು ಎಂಬುದನ್ನು ಯೋಚಿಸುತ್ತೇವೆ. ಈ ಸರ್ಕಾರಿ ಉದ್ಯೋಗಿಗಳ ಹಿತರಕ್ಷಣೆಗೇ ಸರ್ಕಾರದ ಆದ್ಯತೆ. ಈ ಬಗ್ಗೆ ಯಾವುದೇ ಕಾಣಕ್ಕೂ ದಿಢೀರ್ ನಿರ್ಧಾರ ಕೈಗೊಳ್ಳುವುದಿಲ್ಲ. ಆತಂಕ ಬೇಡ ಎಂದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Wednesday, November 28, 2001, 5:30 [IST]