ಅಮೆರಿಕೆಯಲ್ಲಿ ವೈಟುಕೆ ಸರಿಸಾಟಿ ಸಮಸ್ಯೆ, ಸಾಫ್ಟ್ವೇರ್ಗಳಿಗೆ ಬೇಡಿಕೆ
ಚೆನ್ನೈ : ಅಮೆರಿಕದಲ್ಲಿ ಭದ್ರತೆಗೆ ಸಂಬಂಧಿಸಿದ ಸೇವೆಗಳ ಸಾಫ್ಟ್ವೇರ್ಗಳ ಅವಶ್ಯಕತೆ ಹೆಚ್ಚಾಗಿದ್ದು, ಭಾರತದ ಸಾಫ್ಟ್ವೇರ್ ಕಂಪನಿಗಳಿಗೆ ಭಾರೀ ಸಾಫ್ಟ್ವೇರ್ ಆರ್ಡರ್ಗಳು ದೊರೆಯುವ ಸಂಭವವಿದೆ ಎಂದು ಲೇಸಾರ್ ಸಾಫ್ಟ್ ಇನ್ಫೋಸಿಸ್ಟಂಸ್ನ ಅಧ್ಯಕ್ಷ ಮತ್ತು ಎಂಡಿ ಬಿ.ಎಸ್.ಕಾಮತ್ ಹೇಳಿದ್ದಾರೆ.
ಸೆಪ್ಟೆಂಬರ್ 11ರಂದು ವಿಶ್ವ ವಾಣಿಜ್ಯ ಕಟ್ಟಡಗಳ ಮೇಲೆ ಉಗ್ರರು ನಡೆಸಿರುವ ದಾಳಿಯಿಂದ ವೈಟುಕೆ ಸಮಸ್ಯೆಯಷ್ಟೇ ಗಂಭೀರ ಸ್ವರೂಪದ ಬಿಕ್ಕಟ್ಟುಗಳು ಉದ್ಭವಿಸಿವೆ. ದಾಳಿಯಿಂದಾಗಿ ಅವಳಿ ಕಟ್ಟಡಗಳಲ್ಲಿದ್ದ ಅನೇಕ ಕಂಪನಿಗಳ ಅಂಕಿ- ಅಂಶ, ಲೇವಾದೇವಿ ವಗೈರೆ ಮಾಹಿತಿಗಳು ಕಳೆದುಹೋಗಿವೆ. ಏಕೈಕ ಸರ್ವರ್ನಲ್ಲಿ ಅವುಗಳನ್ನು ಸಂಗ್ರಹಿಸಿಡಲಾಗಿತ್ತು. ಯಾವುದೇ ಬ್ಯಾಕ್ಅಪ್ ಇರಲಿಲ್ಲ. ಈಗ ಈ ರೀತಿ ಒಂದೇ ಒಂದು ಸರ್ವರ್ ಇರುವ ಕಂಪನಿಗಳು ಸ್ಟ್ಯಾಂಡ್ಬೈ ಸರ್ವರ್ಗಳನ್ನು ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಭಾರತಕ್ಕೆ ಸಾಕಷ್ಟು ಸಾಫ್ಟ್ವೇರ್ ಆರ್ಡರ್ಗಳು ಹರಿದು ಬರಲಿವೆ ಎಂದು ಕಾಮತ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಈ ಬಾರಿ ವೈಟುಕೆ ಸಮಸ್ಯೆ ತಲೆದೋರಿದ ಅಂದಿಗಿಂತ ಭಿನ್ನವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆಗ ಸರಿಯಾದ ವ್ಯಾಪಾರವಿಲ್ಲದ ಕಾರಣ ಇಂಟರ್ನೆಟ್ ಮೇಲೆ ಹಣ ಸುರಿಯಲಾಗಿತ್ತು. ಆದರೀಗ ಬ್ಯಾಕ್ಅಪ್ ಸಾಫ್ಟ್ವೇರ್ಗಳಿಗೆ ಹೆಚ್ಚು ಬೇಡಿಕೆ ಬರಲಿದೆ. ಇದೇ ಸಮಯದಲ್ಲಿ ಕಳಪೆ ಸಾಫ್ಟ್ವೇರ್ ಸೇವೆ ಕಂಪನಿಗಳು ಹಣ ಮಾಡಿಕೊಳ್ಳುವ ಭಯವೂ ಉಂಟು ಎಂದರು
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications