13 ಸಾವಿರ ರಾಜ್ಯ ಸರ್ಕಾರಿ ಉದ್ಯೋಗಿಗಳ ನೌಕರಿ ಕ್ಷಣಗಣನೆ
ಬೆಂಗಳೂರು : 10 ಸಾವಿರಕ್ಕೂ ಹೆಚ್ಚು ಮಂದಿ ಶಿಕ್ಷಕರು ಸೇರಿದಂತೆ 13 ಸಾವಿರ ಮಂದಿ ಸರ್ಕಾರಿ ನೌಕರರು ಭವಿಷ್ಯದ ಮೇಲೆ ಬಂಡೆ ಬಿದ್ದ ಹತಾಶೆಯಲ್ಲಿ ಮುಳುಗಿದ್ದಾರೆ. 1998 ರ ನಂತರ ಗ್ರಾಮೀಣ ಕೃಪಾಂಕದ ಆಧಾರದ ಮೇಲೆ ರಾಜ್ಯ ಸರ್ಕಾರ ಮಾಡಿಕೊಂಡ ಉದ್ಯೋಗ ನೇಮಕಾತಿಗಳನ್ನು ರದ್ದು ಪಡಿಸಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರ ಮಾಡಿಕೊಂಡಿದ್ದ ತೀರ್ಪನ್ನು ಸುಪ್ರಿಂಕೋರ್ಟ್ ಸೋಮವಾರ ತಳ್ಳಿ ಹಾಕುವುದರೊಂದಿಗೆ 13 ಸಾವಿರ ನೌಕರರು ತಮ್ಮ ನೌಕರಿಯ ಕ್ಷಣಗಣನೆ ಮಾಡುತ್ತಿದ್ದಾರೆ.
ಗ್ರಾಮೀಣ ಕೃಪಾಂಕ ಆಧಾರದ ಮೇಲೆ ಮಾಡಿಕೊಂಡಿರುವ ನೇಮಕಾತಿಗಳನ್ನು ರದ್ದು ಪಡಿಸಿರುವ ಕ್ರಮವನ್ನು ಪರಿಶೀಲಿಸುವಂತೆ ಸರ್ಕಾರ ಹಾಗೂ ನೌಕರರು ಪ್ರತ್ಯೇಕವಾಗಿ ಮಾಡಿಕೊಂಡ ಮನವಿಗಳನ್ನು ನ್ಯಾಯಮೂರ್ತಿ ಜಿ.ಬಿ. ಪಟ್ಟ ನಾಯಕ್ ಹಾಗೂ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ತಿರಸ್ಕರಿಸಿತು.
ಕರ್ನಾಟಕದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಹರೀಶ್ ಪಿ. ಸಾಳ್ವೆ ಅವರು ಸೋಮವಾರ ಮಂಡಿಸಿದ ವಾದವನ್ನು ವಿಭಾಗೀಯ ಪೀಠ ಸಾರಾಸಗಟಾಗಿ ತಿರಸ್ಕರಿಸಿ, ತನ್ನ ಮುನ್ನಿನ ತೀರ್ಪಿಗೇ ಅಂಟಿಕೊಂಡಿತು. ಇದರೊಂದಿಗೆ 1998 ರ ನವಂಬರ್ ನಂತರ ನೇಮಕವಾದ 13 ಸಾವಿರ ನೌಕರರು ನೌಕರಿ ಕಳೆದುಕೊಳ್ಳುವುದು ಖಚಿತವಾದಂತಾಗಿದೆ. ಈಗಾಗಲೇ ಸುಪ್ರಿಂಕೋರ್ಟ್ ತೀರ್ಪು ಅನ್ವಯ ಮುಖಪುಟ / ಇವತ್ತು... ಈ ಹೊತ್ತು...