ಹೋಬಳಿಗೊಂದು ಕೆರೆ ನವೀಕರಣ ಯೋಜನೆಗೆ ನ.30ರಿಂದ ಚಾಲನೆ
ಬೆಂಗಳೂರು : ಮಹತ್ವಾಕಾಂಕ್ಷೆಯ ಜಲವಸತಿ ನಿರ್ವಹಣಾ ಯೋಜನೆಗಾಗಿ ಕರ್ನಾಟಕ ಸರ್ಕಾರ ಕೇಳಿರುವ 996 ಕೋಟಿ ರುಪಾಯಿ ಸಾಲವನ್ನು ವಿಶ್ವ ಬ್ಯಾಂಕ್ ಮಂಜೂರು ಮಾಡುವ ನಿರೀಕ್ಷೆಯಿದೆ. ಮುಂದಿನ ವರ್ಷ -ಫೆಬ್ರವರಿ- ಮಾರ್ಚ್ ಹೊತ್ತಿಗೆ ಸಾಲದ ಹಣ ಬಿಡುಗಡೆಯಾಗಬಹುದು ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತಾಡುತ್ತಿದ್ದರು. ‘ರೈತರ ಕಾಯಕ, ರೈತರ ಕೆರೆ’ ಎಂಬ ಹೊಸ ಯೋಜನೆಯನ್ನು ಸರ್ಕಾರ ಪ್ರಾರಂಭಿಸಲಿದ್ದು, ರಾಜ್ಯದ 745 ಹೋಬಳಿಗಳ ಕನಿಷ್ಠ ತಲಾ ಒಂದು ಕೆರೆಗೆ ಹೊಸ ರೂಪು ಕೊಡಲಾಗುವುದು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಾವಲಂಗ ಹೊಸಕೆರೆ ನವೀಕರಣ ಕಾಮಗಾರಿ ಶುರು ಮಾಡುವುದರ ಮೂಲಕ ನವೆಂಬರ್ 30ರಂದು ಯೋಜನೆಗೆ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಯೋಜನೆಗೆ ಚಾಲನೆ ನೀಡುವರು ಎಂದರು.
ಹೂಳೆತ್ತಿ, ಕೆರೆಗಳನ್ನು ಆಧುನೀಕರಣಗೊಳಿಸುವ ಈ ಯೋಜನೆ ಪೂರ್ಣವಾಗಲು ಇನ್ನು ಒಂದು ವರ್ಷ ಬೇಕಾಗುತ್ತದೆ. ಹೊಸ ಕೆರೆಗಳ ನಿರ್ಮಾಣಕ್ಕೆ ನಬಾರ್ಡ್ 120 ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಿದೆ ಎಂದು ಪ್ರಶ್ನೆಯಾಂದಕ್ಕೆ ಕುಮಾರ್ ಬಂಗಾರಪ್ಪ ಉತ್ತರ ಕೊಟ್ಟರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...