Get Updates
Get notified of breaking news, exclusive insights, and must-see stories!

ಜೋಡಿ ಕೊಲೆ ಬಗ್ಗೆ ಮಾಹಿತಿ ನೀಡಿದರೆ ಲಕ್ಷ ರು. ಬಹುಮಾನ

ಬೆಂಗಳೂರು : ಪಂಚಗಟ್ಟಿ ದಂಪತಿ ಹಾಗೂ ತಾಯಿ -ಮಗನ ಜೋಡಿ ಕೊಲೆ ಪ್ರಕರಣಗಳ ಹಂತಕರಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವವರಿಗೆ ಒಂದು ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಸಾಂಗ್ಲಿಯಾನ ಘೋಷಿಸಿದ್ದಾರೆ.

ಗಿರಿನಗರ ಬಳಿ ಕಂಪ್ಯೂಟರ್‌ ಉದ್ಯಮಿಗಳಾದ ಜವಾಹರ್‌ ಪಂಚಗಟ್ಟಿ ಮತ್ತು ಅನು ಪಂಚಗಟ್ಟಿ ಅವರು ಕೊಲೆಯಾದ ಕೆಲವೇ ದಿನದಲ್ಲೇ ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ತಾಯಿ ಹಾಗೂ ಮಗರ ಬರ್ಬರ ಹತ್ಯೆ ನಡೆದಿತ್ತು. ತಾಯಿ ಹಾಗೂ ಮಗನ ಕೊಲೆಯ ಹಿಂದೆ ದಂಡುಪಾಳ್ಯದ ಕೈವಾಡವಿದೆ ಎಂದು ಅವರು ಶಂಕಿಸಿದ್ದಾರೆ.

ದಂಡುಪಾಳ್ಯದ ಪಾತಕಿಗಳು ನಡೆಸುವ ಕೊಲೆ ಮಾದರಿಯಲ್ಲೇ ಮಲ್ಲಸಂದ್ರದಲ್ಲಿ ಗುರುವಾರ ರಾತ್ರಿ ತಾಯಿ-ಮಗನ ಹತ್ಯೆ ನಡೆದಿದೆ. ಇದರ ಬಗ್ಗೆ ಹಲವು ಸುಳಿವುಗಳೂ ಸಿಕ್ಕಿವೆ. ದಂಡುಪಾಳ್ಯದ ನಾಲ್ಕು ಮಂದಿ ಪ್ರಮುಖ ಆರೋಪಿಗಳು ಇನ್ನೂ ತಲೆ ಮರೆಸಿಕೊಂಡಿದ್ದಾರೆ ಎಂದು ಸಾಂಗ್ಲಿಯಾನ ತಿಳಿಸಿದ್ದಾರೆ.

ಆದರೆ, ಕಳೆದ ಸೋಮವಾರ ನಡೆದ ಪಂಚಗಟ್ಟಿ ಕೊಲೆ ಪ್ರಕರಣದ ಹಿಂದಿನ ನಿಗೂಢತೆ ತಿಳಿದುಬಂದಿಲ್ಲ. ಹೀಗಾಗಿ ಈ ಎರಡು ಪ್ರಕರಣಗಳ ಹಂತಕರ ಬಗ್ಗೆ ಯಾವುದೇ ಮಾಹಿತಿ ನೀಡುವವರಿಗೆ ಸೂಕ್ತ ರಕ್ಷಣೆ ನೀಡುವುದಲ್ಲದೆ, ಲಕ್ಷ ರುಪಾಯಿ ಬಹುಮಾನ ನೀಡಲಾಗುವುದು ಎಂದು ಬೆಂಗಳೂರು ಪೊಲೀಸ್‌ ಕಮಿಷನರ್‌ ಸಾಂಗ್ಲಿಯಾನ ಘೋಷಿಸಿದ್ದಾರೆ. ಈ ಕೊಲೆಗಳ ಬಗ್ಗೆ ತನಿಖೆ ನಡೆಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.

(ಇನ್‌ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಂಗ್ಲಿಯಾನ ವಾಚ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+