ಹೆಚ್ಚು ಮಕ್ಕಳ ಹೆತ್ತ ದಾಖಲೆಗಾಗಿ ಹೋರಾಡುತ್ತಿರುವ ದಂಪತಿಗೆ ಗುಡ್ ಲಕ್!
ಗಿನ್ನೆಸ್ ದಾಖಲೆ ಮಾಡಬೇಕು ಅಂತ ಯಾರಿಗೆ ಆಸೆ ಇರುವುದಿಲ್ಲ ಹೇಳಿ. ಕೂದಲು ಸೀಳಿ ಚಿತ್ರ ಬಿಡಿಸಿದವ, ಅಕ್ಕಿ ಕಾಳಿಲ್ಲಿ ಅಕ್ಕರ ಕೆತ್ತಿದವ, ಭಯವಾಗುವ ಹಾಗೆ ಉದ್ದುದ್ದ ಉಗುರು ಬಿಟ್ಟವರು, ಮೀಸೆಯನ್ನೇ ಕತ್ತರಿಸದೆ ರೆಕಾರ್ಡ್ ಮಾಡಿಕೊಂಡವರು ಊಹ್ ... ಏನೇನು ವಿಚಿತ್ರ ದಾಖಲೆಗಳು. ಹೀಗೆ ಅತೀ ಹೆಚ್ಚು ಸಂಖ್ಯೆಯ ಮಕ್ಕಳನ್ನ ಹುಟ್ಟಿಸಿ ದಾಖಲೆ ಸ್ಥಾಪಿಸುವುದಕ್ಕೆ ಆಗುವುದಿಲ್ಲವೇ...?
‘ಯಾಕಿಲ್ಲ ಟ್ರೆೃ ಮಾಡಿ ನೋಡು ಮಾರಾಯ ...’ ಅಂತ ಉತ್ತರ ಪ್ರದೇಶದ ಹಳ್ಳಿಯಾಂದರಲ್ಲಿ ಯುವಕರು ಪ್ರಶ್ನೆ ಕೇಳಿದವನನ್ನು ಜೋಕು ಮಾಡಿದರು. ಸರಿ. ಆತ ಪ್ರಾಜೆಕ್ಟ್ ಶುರು ಮಾಡಿಯೇ ಬಿಡುವುದಾ... ಈಗ ಆತ ತನ್ನ 23ನೇ ಮಗುವಿನ ನಿರೀಕ್ಷೆಯಲ್ಲಿದ್ದಾನೆ. ಪ್ರಾಯ 54. ಗಂಡನ ದಾಖಲೆ ಸಾಹಸದಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಹೆಂಡತಿಗೆ ಈಗ 47 ವರ್ಷ ವಯಸ್ಸು. ತುಂಬು ಬಸುರಿ.
ಕೂಲಿ ಕೆಲಸವನ್ನೇ ನಂಬಿದ ಅವರದು ಬಡ ಕುಟುಂಬ. ನಮ್ಮದೂ ವಿಶ್ವ ದಾಖಲೆಯಾಗುತ್ತದೆ. ಸಾಕಷ್ಟು ಹಣ ಬರುತ್ತದೆ. ಸಂಸಾರಕ್ಕೆ ಬರಲಿರುವ ಒಳ್ಳೇ ದಿನಕ್ಕೆ ಆ ಕುಟುಂಬ ಕಾಯುತ್ತಿದೆ. ಹುಟ್ಟಿದ 22 ಮಕ್ಕಳಲ್ಲಿ ಕೈಗೆ ದಕ್ಕಿರುವುದು 15. ಕೈಕಾಲು ಗಟ್ಟಿಯಾದವರು ಹೊಲದಲ್ಲಿ ದುಡಿಯುತ್ತಿದ್ದಾರೆ ಅಂತ ಏಷ್ಯನ್ ಏಜ್ ಪತ್ರಿಕೆ ವರದಿ ಮಾಡಿದೆ.
ಹೆಚ್ಚು ಮಕ್ಕಳಾದ ಹಾಗೆ ಕುಟುಂಬದ ಆದಾಯವೂ ಹೆಚ್ಚುತ್ತದೆ. ಖ್ಯಾತಿಯೂ ಬರುತ್ತದೆ ಎಂಬ ಒಂದೇ ಕಲ್ಲಿಗೆ ಎರಡು ಹಕ್ಕಿಯ ತತ್ವ ಈ ಗಂಡ ಹೆಂಡಿರದು. ಸ್ಥಳೀಯ ರಾಜಕಾರಣಿಗಳು ಈ ದಂಪತಿಗೆ ಬುದ್ಧಿ ಹೇಳಿದ್ದು ಏನೂ ಪ್ರಯೋಜನವಾಗಲಿಲ್ಲ. 1976ರರಿಂದ ಮಕ್ಕಳ ದಾಖಲೆಗಾಗಿ ಇವರು ಶ್ರಮಿಸುತ್ತಿದ್ದಾರೆ.
ನಿಜವಾಗಿಯೂ ದಾಖಲೆ ಇವರ ಪಾಲಿನದ್ದಾಗಲಿದೆಯೇ ಅಥವಾ ಇವರು ಇನ್ಯಾರದೋ ದಾಖಲೆಯನ್ನು ಮುರಿಯಬೇಕಾಗಿದೆಯೇ ಎನ್ನುವುದು ಗೊತ್ತಾಗಿಲ್ಲ.
(ಇನ್ಫೋ ವಾರ್ತೆ)
ನೀವೇನು ಹೇಳುತ್ತೀರಿ ?
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications