ನಿಮ್ಮ ಮಕ್ಕಳು ಓದುವ ಚರಿತ್ರೆ ಪಠ್ಯದಲ್ಲಿ ತಪ್ಪು ಅಂಕಿ ಅಂಶ!
ನವದೆಹಲಿ : ನಾಲ್ಕು ತರಗತಿಗಳ ಚರಿತ್ರೆ ಪಾಠ ಪುಸ್ತಕಗಳಲ್ಲಿ ತಪ್ಪು ಅಂಕಿ ಅಂಶಗಳು ಮುದ್ರಿತವಾಗಿರುವುದನ್ನು ಶುಕ್ರವಾರ ರಾಜ್ಯಸಭೆಯಲ್ಲಿ ಸರಕಾರ ಒಪ್ಪಿಕೊಂಡಿದೆ.
ಎನ್ಸಿಇಆರ್ಟಿ(ಶೈಕ್ಷಣಿಕ ಅಧ್ಯಯನ ಮತ್ತು ತರಬೇತಿಗೆ ಸಂಬಂಧಿಸಿದ ರಾಷ್ಟ್ರೀಯ ಸಮಿತಿ) ರಚಿಸಿರುವ ಪಾಠಪುಸ್ತಕಗಳಲ್ಲಿ ಅಂಕಿಅಂಶ, ಪಕ್ಷಪಾತ ಮತ್ತು ಉತ್ಪ್ರೇಕ್ಷೆಯಂತಹ ತಪ್ಪುಗಳು ಇವೆ. ಈ ತಪ್ಪುಗಳನ್ನು ಸರಿಪಡಿಸಲು ಸರಿಯಾದ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಸದನದಲ್ಲಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವೆ ರೀಟಾ ವರ್ಮಾ ಈ ವಿಷಯವನ್ನು ತಿಳಿಸಿದರು. ಚರಿತ್ರೆಕಾರ ರೊಮಿಲಾ ಟೋಪಾರ್ (6ನೇ ತರಗತಿ), ರಾಮ್ ಶರಣ್ ಶರ್ಮಾ (11ನೇ ತರಗತಿ) ಅವರ ಪ್ರಾಚೀನ ಭಾರತ ಪುಸ್ತಕವನ್ನು 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಇವುಗಳಲ್ಲಿ ಆಕ್ಷೇಪಣಾರ್ಹ ವಿಷಯಗಳು ಕಂಡು ಬಂದಿರುವುದಾಗಿ ಹೇಳಿದರು.
11 ನೇ ತರಗತಿಗೆ ಸೂಚಿಸಲಾಗಿರುವ ಅರ್ಜುನ್ ಮತ್ತು ಇಂದಿರಾ ದೇವ್ ಅವರ ಇನ್ನೆರಡು ಪಠ್ಯ ಪುಸ್ತಕ ಹಾಗೂ ಸತೀಶ್ಚಂದ್ರ ಅವರ ಮಧ್ಯಕಾಲೀನ ಭಾರತ ಎಂಬ ಪುಸ್ತಕಗಳಲ್ಲಿ ಕಂಡು ಬಂದಿರುವ ತಪ್ಪುಗಳನ್ನು ವಿರೋಧಿಸಿ ಹಲವು ಕಡೆ ಪ್ರತಿಭಟನೆಗಳೂ ನಡೆದಿರುವುದಾಗಿ ವರ್ಮಾ ತಿಳಿಸಿದರು.
ಪಠ್ಯ ಪುಸ್ತಕಗಳ ಮುದ್ರಣವನ್ನು ಎನ್ಸಿಇಆರ್ಟಿ ಮತ್ತೆ ಹೊಸದಾಗಿ ಆರಂಭಿಸಿದ್ದು, ತಪ್ಪುಗಳು ಪುನರಾವರ್ತನೆಯಾಗದಂತೆ ಕಾಳಜಿ ತೆಗೆದುಕೊಳ್ಳಲಾಗುವುದು ಎಂದು ವರ್ಮಾ ಭರವಸೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications