ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರಣಾಗುವಂತೆ ವೀರಪ್ಪನನ್ನು ಸರ್ಕಾರ ಕೇಳುವುದಿಲ್ಲ- ಖರ್ಗೆ

By Staff
|
Google Oneindia Kannada News

ಬೆಂಗಳೂರು : ಕಾಡುಗಳ್ಳ ವೀರಪ್ಪನ್‌ನನ್ನು ಶರಣಾಗುವಂತೆ ಕರ್ನಾಟಕ ಎಂದಿಗೂ ಕೇಳುವುದಿಲ್ಲ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಕಾಡುಗಳ್ಳನನ್ನು ಶರಣಾಗುವಂತೆ ಕೇಳುವ ಅಗತ್ಯ ಸರ್ಕಾರಕ್ಕಿಲ್ಲ . ಬೇಕಿದ್ದರೆ ಪೊಲೀಸರ ಮುಂದೆ ವೀರಪ್ಪನ್‌ ಶರಣಾಗಬಹುದು. ಪ್ರಸ್ತುತ ವೀರಪ್ಪನ್‌ ವಿರುದ್ಧ ನಡೆಯುತ್ತಿರುವ ವಿಶೇಷ ಕಾರ್ಯಪಡೆಗಳ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಹೇಳಿದರು.

ತಮಿಳುನಾಡು ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರಿಗೆ ಪತ್ರಕರ್ತರೊಬ್ಬರ ಮೂಲಕ ವೀರಪ್ಪನ್‌ ಕೆಸೆಟ್‌ ಕಳುಹಿಸಿದ್ದಾನೆ ಎನ್ನುವ ಸುದ್ದಿಯ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿದ ಅವರು, ವದಂತಿಗಳ ಕುರಿತು ನಾನು ಮಾತನಾಡುವುದಿಲ್ಲ ಎಂದರು. ಕರ್ನಾಟಕಕ್ಕೆ ಯಾವ ಕೆಸೆಟ್‌ ಕೂಡ ಬಂದಿಲ್ಲ ಹಾಗೂ ಪನ್ನೀರ್‌ಸೆಲ್ವಂ ಅವರಿಗೆ ಬಂದಿದೆ ಎನ್ನಲಾದ ಕೆಸೆಟ್‌ನ ಅಧಿಕೃತತೆ ದೃಢಪಟ್ಟಿಲ್ಲ ಎಂದು ಖರ್ಗೆ ಹೇಳಿದರು.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X