ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯಪ್ಪನ ಭಕ್ತರ ನೆರವಿಗೆ ಶಬರಿಮಲೆಯಲ್ಲಿ ಸ್ಟೇಟ್‌ ಬ್ಯಾಂಕ್‌ ಶಾಖೆ

By Staff
|
Google Oneindia Kannada News

ಶಬರಿಮಲೆ: ಇದು ಶಬರಿಮಲೆ ಅಯ್ಯಪ್ಪನ ಸೀಸನ್‌. ಸ್ವಾಮಿಯ ದರ್ಶನಕ್ಕೆ ದೇಶದ ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಈ ಭಕ್ತರ ಅನುಕೂಲಕ್ಕಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್‌ ಅಯ್ಯಪ್ಪನ ಸನ್ನಿಧಾನದಲ್ಲಿ ವಿಸ್ತರಣಾ ಶಾಖೆಯಾಂದನ್ನು ತೆರೆದಿದೆ.

ಅಯ್ಯಪ್ಪನ ಭಕ್ತರ ನೆರವಿಗಾಗಿಯೇ ಪಂಪಾ ಸನ್ನಿಧಾನದ ಗಣಪತಿ ದೇವಸ್ಥಾನದ ಬಳಿ ನವೆಂಬರ್‌ 16ರಿಂದ ಈ ಶಾಖೆ ಆರಂಭಿಸಲಾಗಿದೆ ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿದೆ. ಈ ಶಾಖೆಯಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಅದರ ಸಹಯೋಗಿ ಬ್ಯಾಂಕ್‌(ಯಾವುದೇ ಸ್ಟೇಟ್‌ ಬ್ಯಾಂಕ್‌ ಶಾಖೆಯಿಂದ) ಗಳಿಂದ ಪಥನಂಥಿಟ್ಟು ಶಾಖೆಯ ಹೆಸರಿಗೆ ಪಡೆದ ಡಿಮಾಂಡ್‌ ಡ್ರಾಫ್ಟ್‌ಗಳನ್ನು ನಗದೀಕರಿಸಿಕೊಳ್ಳಬಹುದಾಗಿದೆ.

ಪಿಎಎನ್‌ (ಆದಾಯ ತೆರಿಗೆ ಇಲಾಖೆ ನೀಡುವ ಕಾರ್ಡ್‌), ಡ್ರೆೃವಿಂಗ್‌ ಲೈಸೆನ್ಸ್‌, ಚುನಾವಣೆ ಗುರುತು ಚೀಟಿ, ಪಾಸ್‌ಪೋರ್ಟ್‌ ಅಥವಾ ಡಿಮಾಂಡ್‌ ಡ್ರಾಫ್ಟ್‌ ಪಡೆದ ಬ್ಯಾಂಕ್‌ನಿಂದ ಸಹಿ ದೃಢೀಕರಿಸಲು ಪಡೆದ ಪತ್ರ - ಇದಾವುದಾದರೂ ಒಂದನ್ನು ಗುರುತಿಗಾಗಿ ತೋರಿಸಿ, ಡಿಮಾಂಡ್‌ ಡ್ರಾಫ್ಟ್‌ ಹಣ ಪಡೆಯಬಹುದು ಎಂದು ಅದು ತಿಳಿಸಿದೆ.

ಅಲ್ಲದೆ, ಈ ವಿಸ್ತರಣಾ ಶಾಖೆಯಿಂದ ಡಿಮಾಂಡ್‌ ಡ್ರಾಫ್ಟ್‌ - ಬ್ಯಾಂಕರ್ಸ್‌ ಚೆಕ್‌ ಪಡೆಯುವ ಅವಕಾಶವನ್ನೂ ಗ್ರಾಹಕರಿಗೆ ಕಲ್ಪಿಸಲಾಗಿದೆ. ಹೆಚ್ಚಿನ ವಿವರಗಳಿಗೆ [email protected] ಗೆ ಇ ಮೇಲ್‌ ಮಾಡಬಹುದು. ಬ್ಯಾಂಕ್‌ನ ವೆಬ್‌ ಸೈಟ್‌ ವಿಳಾಸ: ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X