ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಪ್‌ಹೌಸ್‌ ಬಳಿಯ ಮರಕ್ಕೆ ನೇಣು ಹಾಕಿಕೊಂಡ ಬಳ್ಳಿಗೆರೆ ರೈತ

By Staff
|
Google Oneindia Kannada News

ನೆಲಮಂಗಲ : ಸಾಲ ಸೋಲದ ಸುಳಿಗೆ ಸಿಕ್ಕು ಸಾವಿಗೆ ಶರಣಾದ ರೈತರ ಪಟ್ಟಿಗೆ ಇನ್ನೊಂದು ಸೇರ್ಪಡೆ. ಈ ಬಾರಿ ಸಾವಿಗೆ ಶರಣಾದ ರೈತ ದೂರದ ಉತ್ತರ ಕರ್ನಾಟಕಕ್ಕೆ ಸೇರಿದವನಲ್ಲ, ಸಿಲಿಕಾನ್‌ ವ್ಯಾಲಿಗೆ ಹೊಂದಿಕೊಂಡಿರುವ ನೆಲಮಂಗಲದ ಸಮೀಪದ ಬಳ್ಳಿಗೆರೆಯವ.

ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಹೆಸರು ಮಾಯಣ್ಣ (40). ಬಳ್ಳಿಗೆರೆಯ ಈತ ಬುಧವಾರ ತನ್ನ ಪಂಪ್‌ಹೌಸ್‌ ಬಳಿಯ ಮರವೊಂದಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೂ ಅಭಿವೃದ್ಧಿ ಬ್ಯಾಂಕ್‌ ಹಾಗೂ ಖಾಸಗಿ ಬಂಡವಾಳಗಾರರಿಂದ ಸಾಲ ಪಡೆದಿದ್ದ ಮಾಯಣ್ಣ ನಿರೀಕ್ಷಿತ ಬೆಳೆ ಬಾರದ್ದರಿಂದ ನಿರಾಶನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಯುವ ಮುನ್ನ ತಾನು ಪಡೆದಿರುವ ಸಾಲದ ವಿವರಗಳನ್ನು ಮಾಯಣ್ಣ ಬರೆದಿರಿಸಿದ್ದಾನೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X