Get Updates
Get notified of breaking news, exclusive insights, and must-see stories!

ಬರ ಪರಿಸ್ಥಿತಿ :ಬನವಾಸಿ ಕದಂಬೋತ್ಸವ,ಕರಾವಳಿ ಉತ್ಸವಗಳು ಸರಳ

ಕಾರವಾರ: ವಾರ್ಷಿಕ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಬನವಾಸಿಯ ಕದಂಬೋತ್ಸವ ಹಾಗೂ ಕಾರವಾರದ ಕರಾವಳಿ ಉತ್ಸವಗಳನ್ನು ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಡಿಸೆಂಬರ್‌ 22 ಅಥವಾ 23ರಂದು ಬನವಾಸಿಯಲ್ಲಿ ಕದಂಬೋತ್ಸವ ಹಾಗೂ ಜನವರಿ ತಿಂಗಳಲ್ಲಿ ಕರಾವಳಿ ಉತ್ಸವವನ್ನು ಸರಳವಾಗಿ ಆಚರಿಸಲು ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ನೇತೃತ್ವದ ಸಭೆಯಲ್ಲಿ ಭಾನುವಾರ ನಿರ್ಧರಿಸಲಾಯಿತು. ಇದೇ ರೀತಿ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಇತರ ಸಾಂಸ್ಕೃತಿಕ ಉತ್ಸವಗಳನ್ನು ಎರಡು ದಿನಕ್ಕೆ ಬದಲಾಗಿ ಒಂದೇ ದಿನದಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಕರಾವಳಿ ಉತ್ಸವಗಳು ಕಳೆದ ಎರಡು ವರ್ಷಗಳಿಂದ ಒಂದಿಲ್ಲೊಂದು ಕಾರಣದಿಂದ ರದ್ದಾಗುತ್ತಲೇ ಇವೆ. ಈ ಬಾರಿ ಒಂದು ವಾರಕ್ಕೆ ಬದಲಾಗಿ ಎರಡೇ ದಿನಗಳ ಕರಾವಳಿ ಉತ್ಸವವನ್ನು ಆಚರಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಯನ್ನೇ ದೃಷ್ಠಿಯಲ್ಲಿಟ್ಟುಕೊಂಡು ಉತ್ಸವವನ್ನು ಆಯೋಜಿಸಬೇಕು ಎಂದು ದೇಶಪಾಂಡೆ ಸಭೆಯಲ್ಲಿ ಸಲಹೆ ಮಾಡಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+