Get Updates
Get notified of breaking news, exclusive insights, and must-see stories!

ತ್ವರೆ ಮಾಡಿ ! ಹಾಸನಾಂಬ ದೇವಾಲಯದ ಬಾಗಿಲು ತರೆದಿದೆ

ಹಾಸನ : ಇಲ್ಲಿನ ಪ್ರಸಿದ್ಧ ಹಾಸನಾಂಬ ದೇವಸ್ಥಾನದ ಬಾಗಿಲು ವಾರ್ಷಿಕ ವಿಧಿಯಂತೆ ಗುರುವಾರ ಅಂದರೆ ನವೆಂಬರ್‌ 8ರಂದು ಭಕ್ತರಿಗಾಗಿ ಪುನಃ ತೆರೆಯಿತು.

ಮಧ್ಯಾಹ್ನದ ಮಹಾ ಪೂಜೆಯಾಂದಿಗೆ ದೇವಸ್ಥಾನದ ಬಾಗಿಲು ತೆರೆಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದ ಭಕ್ತರು ದೇವರ ದರ್ಶನ ಪಡೆದರು. ಕಳೆದ ವರ್ಷ ಬಾಗಿಲು ಮುಚ್ಚುವಾಗ ದೇವರಿಗೆ ಅಲಂಕಾರಕ್ಕಾಗಿ ಇಟ್ಟ ಹೂವುಗಳು ಈ ವರ್ಷವೂ ಸುವಾಸನೆಯಿಂದಲೇ ಇರುವುದು ಇಲ್ಲಿನ ವಿಶೇಷ.

ದೇವಸ್ಥಾನದ ಬಾಗಿಲು ತೆರೆಯುವಾಗ ಸಂಪ್ರದಾಯದಂತೆ ಊರಿನ ಅರಸು ಮನೆತನದ ನರಸಿಂಹರಾಜ ಅರಸು ಅವರು ದೇವಳದ ಬಾಗಿಲು ತೆರೆಯುತ್ತಿರುವಂತೆಯೇ ಬಾಳೆಕಂದು ಕತ್ತರಿಸಿದರು. ಮುನ್ಸಿಪಲ್‌ ಕೌನ್ಸಿಲ್‌ ಸಭೆಯ ಅಧ್ಯಕ್ಷ ಚೆನ್ನವೀರಪ್ಪ ಮತ್ತು ಕಮಿಶನರ್‌ ಬಿ.ಎ. ಪರಮೇಶ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನವೆಂಬರ್‌ 17ರವರೆಗೆ ದೇವಸ್ಥಾನದ ಬಾಗಿಲು ತೆರೆದಿರುತ್ತದೆ.

ಪ್ರತಿ ವರ್ಷ ಆಶ್ವೀಜ ಮಾಸದ ನಂತರ ಪ್ರಥಮ ಗುರುವಾರದಂದು ದೇವಸ್ಥಾನದ ಬಾಗಿಲು ತೆರೆಯಲಾಗುವುದು. ಅನಂತರ ಸಂಪ್ರದಾಯದಂತೆ, ಕನಿಷ್ಟವೆಂದರೆ ಒಂಬತ್ತು ದಿನ, ಗರಿಷ್ಠವೆಂದರೆ 15 ದಿನಗಳವರೆಗೆ ದೇವಸ್ಥಾನ ತೆರೆದಿರುತ್ತದೆ. ಈ ಅವಧಿಯಲ್ಲಿ ಶ್ರೀ ದೇವಿಯ ಆಶೀರ್ವಾದ ಪಡೆಯುವುದು ಅತ್ಯಂತ ಪವಿತ್ರ ಎಂದು ಪರಿಗಣಿಸಲ್ಪಟ್ಟಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+