ಬಾಲ್ಯದ ನೆನಪುಗಳೇ ಹಾಗೆ, ಸಚಿವರೂ ಹೊರತಲ್ಲ!

ಬಾಲಭವನದಲ್ಲಿ ಎಂದಿನಂತೆ ಚಿಣ್ಣರ ಮೇಳ. ಮಕ್ಕಳಲ್ಲಿ ಆನಂದ, ಸಂತೋಷ, ಉತ್ಸಾಹ. ಮಕ್ಕಳ ಈ ಉತ್ಸಾಹ ಕಂಡ ರಾಜ್ಯದ ಸಚಿವೆಯರಿಬ್ಬರು, ಮಕ್ಕಳೊಂದಿಗೆ ಮಕ್ಕಳಾಗಿ ಕುಣಿದು ಕುಪ್ಪಳಿಸಿದರು, ಬಾಲ್ಯದ ನೆನಪನ್ನು ಮೆಲುಕುಹಾಕುತ್ತಾ ಕೋಲು ಕೋಲಣ್ಣ ಕೋಲೆ, ಕೋಲು ಕೋಲೆ ಚಿಕ್ಕೋಲು ಕೋಲಣ್ಣ ಕೋಲೆ ಎಂದು ಕೋಲಾಟವಾಡಿದರು, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ರಾಜ್ಯಾದ್ಯಂತದಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ಚಿಣ್ಣರಿಗೆ ಅಮಿತುತ್ಸಾಹ ತುಂಬಿದರು.
ಜವಾಹರ ಬಾಲಭವನದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ರಾಜ್ಯಮಟ್ಟದ ವಸತಿ ಸಹಿತ ಮಕ್ಕಳ ಉತ್ಸವ ಉದ್ಘಾಟಿಸಲು ಆಗಮಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಸುವ್ವಿ ಸುವ್ವಾಲೆ ಬಾಲೆ ಎಂದು ಹಾಡುತ್ತಾ ಕೋಲಾಟವಾಡುತ್ತಾ ಹೆಜ್ಜೆ ಹಾಕುತ್ತಿದ್ದ ಮಕ್ಕಳೊಂದಿಗೆ ಸೇರಿ ತಾವೂ ಕೋಲಾಟವಾಡಿದಾಗ, ಪ್ರಾಯೋಜಕರು, ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟು ನಿಂತರು.
ಇದಕ್ಕೂ ಮುನ್ನ ಸಚಿವೆಯರಿಬ್ಬರೂ ಸಪ್ತಾಹದ ಅಂಗವಾಗಿ ನಡೆಯಲಿರುವ ವಿವಿಧ ಸ್ಪರ್ಧೆಗಳಿಗಾಗಿ ನಿರ್ಮಿಸಲಾಗಿರುವ ಕುಂಬಾರನ ಕುಟೀರ, ಕಾಗದ ಶಿಲ್ಪಿ, ಮಯೂರ ಗೊಂಬೆ, ಬದುಕೇ ಬಣ್ಣ, ಗಾನಕೋಗಿಲೆ, ಚಿಣ್ಣರ ಲೋಕ ಮೊದಲಾದ ಕುಟೀರಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಸೋಮನಕುಣಿತದ ಮುಖವಾಡವನ್ನೂ ಮುಖದ ಮುಂದಿಟ್ಟುಕೊಂಡು ನರ್ತಿಸಿ, ತಾವೂ ಸಂತೋಷ ಪಟ್ಟು, ಮಕ್ಕಳನ್ನೂ ಸಂತೋಷ ಪಡಿಸಿದರು. ಮಕ್ಕಳ ನೃತ್ಯವನ್ನು ಕಣ್ಣಾರೆ ಕಂಡು, ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಶೋಭಾ ನಂಬೀಶನ್ ಹಾಜರಿದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications