ಅಟಲ್ ಔತಣಕೂಟ:ಅನಿವಾಸಿ ಭಾರತೀಯ ಸಂಘಗಳ ಕೋಳಿಜಗಳ
ನ್ಯೂಯಾರ್ಕ್: ಪ್ರಧಾನಿ ವಾಜಪೇಯಿ ಅವರಿಗೋಸ್ಕರ ಶನಿವಾರ (ನ.10) ಆಯೋಜಿಸಿರುವ ಔತಣ ಕೂಟದ ಬಗ್ಗೆ ಅನಿವಾಸೀ ಭಾರತೀಯರ ಸಂಘಟನೆಗಳ ನಡುವೆ ಕೋಳಿ ಜಗಳ ಆರಂಭವಾಗಿದೆ.
ಸುಮಾರು ಎರಡು ಡಝನ್ಗೂ ಹೆಚ್ಚು ಸಂಘಟನೆಗಳು, ಬಿಜೆಪಿಯ ಓವರ್ಸೀಸ್ ಫ್ರೆಂಡ್ಸ್(ಓಎಫ್ಬಿಜೆಪಿ)ನ ಜೊತೆಗೆ ಔತಣದ ಸಹ ಪ್ರಾಯೋಜಕತ್ವ ವಹಿಸಿಕೊಂಡಿವೆ. ಆದರೆ ಈ ಡಝನುಗಟ್ಟಲೆ ಸಂಘಟನೆಗಳ ಆಗರದಿಂದ ಹೊರಗುಳಿದಿರುವ ಕೆಲ ಸಂಘಟನೆಗಳು ಬಿಜೆಪಿಯು ತನ್ನ ಬೆಂಬಲಿಗರೊಂದಿಗಷ್ಟೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಔತಣ ಕಾರ್ಯಕ್ರಮವನ್ನು ಹೈಜಾಕ್ ಮಾಡಿರುವುದಾಗಿ ದೂರುತ್ತಿವೆ.
ಬಿಜೆಪಿಯ ಈ ಕ್ರಮವನ್ನು ‘ಕಾರ್ಯಕ್ರಮದ ಹೈಜಾಕ್’ ಎಂದು ತೀವ್ರವಾಗಿ ಖಂಡಿಸಿದವರು ಇಂಡಿಯನ್ ನ್ಯಾಷನಲ್ ಓವರ್ಸೀಸ್ ಕಾಂಗ್ರೆಸ್ನ ಅಧ್ಯಕ್ಷ ಸುರಿಂದರ್ ಸಿಂಗ್ ಮಲ್ಹೋತ್ರಾ. ‘ವಾಜಪೇಯಿ ಭಾರತಕ್ಕೆ ಪ್ರಧಾನಿಯೇ ಅಥವಾ ಬಿಜೆಪಿಗೆ ಪ್ರಧಾನಿಯೇ ? ಹೀಗೆ ಮಾಡುವುದರಿಂದ ಅವರಿಗೇ ನಷ್ಟ ಹೊರತು ನಮಗಲ್ಲ ...’ ಎಂದ ಅವರು ಹೀಗಾಗಲು ಅವಕಾಶ ನೀಡಿರುವ ನ್ಯೂಯಾರ್ಕ್ ರಾಯಭಾರಿಯನ್ನೂ ದೂರಿದ್ದಾರೆ. ‘ಕಾರ್ಯಕ್ರಮ ಸೂತ್ರವನ್ನು ತಾನೇ ಕೈಗೆತ್ತಿಕೊಳ್ಳುವ ಬದಲು ಸಂಘಟನೆಗಳ ಗುಂಪಿಗೆ ಅವಕಾಶ ಯಾಕೆ ನೀಡಬೇಕು ?ಭಾರತದ ಯಾವುದೇ ನಾಯಕರು ಬಂದಾಗಲೂ ರಾಯಭಾರಿ ಕಚೇರಿಯೇ ಔತಣ ಅಥವಾ ರಿಸೆಪ್ಷನ್ ಕಾರ್ಯಕ್ರಮವನ್ನು ಆಯೋಜಿಸುತ್ತಿತ್ತು. ಈಗೇಕೆ ಹೊಸ ಕ್ರಮ ?’
ಈ ಮಾತಿಗೆ ರಾಯಭಾರಿ ಕಚೇರಿ ತನ್ನದೇನೂ ತಪ್ಪಿಲ್ಲ ಎಂದಿದೆ. ಯಾಕೆಂದರೆ ಮೊದಲು ವಾಜಪೇಯಿ ಭೇಟಿ ನೀಡುವುದು ವಾಷಿಂಗ್ಟನ್ಗೆ. ಅಲ್ಲಿನ ರಾಯಭಾರ ಕಚೇರಿ ಪ್ರಧಾನಿಗೋಸ್ಕರ ಔತಣವನ್ನು ಈಗಾಗಲೇ ಆಯೋಜಿಸಿದೆ. ಒಂದುವೇಳೆ ಪ್ರಧಾನಿ ನ್ಯೂಯಾರ್ಕ್ಗೆ ಮೊದಲು ಭೇಟಿ ನೀಡಿದ್ದಲ್ಲಿ ಆಗ ಔತಣ ಏರ್ಪಡಿಸುವ ಜವಾಬ್ದಾರಿ ನ್ಯೂಯಾರ್ಕ್ ರಾಯಭಾರ ಕಚೇರಿಯದಾಗುತ್ತಿತ್ತು.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications