ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಳ ದಳ ಒಟ್ಟಿಗಿರೆ ಬಲವಯ್ಯ ಎಂದರು ಸುತ್ತೂರು ಶ್ರೀಗಳು
ಚಾಮರಾಜನಗರ: ವೈಯಕ್ತಿಕ ಪ್ರತಿಷ್ಠೆ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಜಾತ್ಯತೀತ ಹಾಗೂ ಸಂಯುಕ್ತ ಜನತಾದಳಗಳು ಒಂದಾಗಬೇಕೆಂದು ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಆಶಿಸಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿಯಲ್ಲಿ ಇತ್ತೀಚೆಗೆ ಜರುಗಿದ ಸ್ವಾತಂತ್ರ್ಯ ಯೋಧ ದಿ.ಎಚ್.ಎನ್.ಶ್ರೀಕಂಠೇಶ್ವರ ಶೆಟ್ಟರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡುತ್ತಿದ್ದರು. ವೈಯಕ್ತಿಕ ಪ್ರತಿಷ್ಠೆಯನ್ನು ಪಕ್ಷ ರಾಜಕಾರಣದಲ್ಲಿ ಯಾರೂ ತೋರಬಾರದು. ತತ್ವಸಿದ್ಧಾಂತಗಳು ಮೂಲೆಗುಂಪಾಗಿ ವ್ಯಕ್ತಿ ಪ್ರತಿಷ್ಠೆಯೇ ಮುಂದಾದಾಗ ಪಕ್ಷದ ಏಳಿಗೆ ಸಾಧ್ಯವಾಗುವುದಿಲ್ಲ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಹಲವು ನಾಯಕರು ಉಬ್ಬಣಗಳು ಒಗ್ಗೂಡಬೇಕೆಂದು ಹೇಳಿದ್ದಾರೆ. ಇವರುಗಳ ಪ್ರಯತ್ನ ಯಶಸ್ವಿಯಾಗಿ ಉಭಯ ದಳಗಳು ಒಂದಾಗಲಿ ಎಂದು ದೇಶಿಕೇಂದ್ರ ಸ್ವಾಮೀಜಿ ಆಶಿಸಿದರು.
(ಇನ್ಫೋ ವಾರ್ತೆ)
Comments
Story first published: Sunday, November 4, 2001, 5:30 [IST]