Get Updates
Get notified of breaking news, exclusive insights, and must-see stories!

‘ಸಾಧಕರ ಹೆಸರು ಕಳಿಸಿಕೊಡಿ, ನಾವು ಗೌರವಿಸುತ್ತೇವೆ’-ಕೃಷ್ಣ

ಬೆಂಗಳೂರು : ಇಂದು ರಾಜ್ಯೋತ್ಸವ ಬಂದಿದೆ. ಕನ್ನಡಾಭಿಮಾನ ರಾಜ್ಯದ ಮೂಲೆ ಮೂಲೆಯಲ್ಲಿಯೂ ವ್ಯಕ್ತವಾಗುತ್ತಿದೆ. ಆದರೆ ಇದೇ ಅಭಿಮಾನ, ಕನ್ನಡ ನಿಷ್ಠೆ ವರ್ಷವಿಡೀ ಇರಬೇಕು ಎಂದು ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಕನ್ನಡಿಗರಿಗೆ ಕಿವಿ ಮಾತು ಹೇಳಿದ್ದಾರೆ.

ಅವರು ಗುರುವಾರ ಸಂಜೆ ರವೀಂದ್ರಕಲಾ ಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನಾಡುತ್ತಿದ್ದರು. ವರ್ಷಪೂರ್ತಿ ಕನ್ನಡ ಪ್ರೀತಿ ತೋರುವ ದೀಕ್ಷೆ ತೊಡಬೇಕು ಎಂದ ಮುಖ್ಯಮಂತ್ರಿಗಳು ಪ್ರಶಸ್ತಿಗಳ ಬಗ್ಗೆ ಮಾತನಾಡುತ್ತಾ ಈ ವರ್ಷ ವಿಶೇಷವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವ ಪ್ರಯತ್ನ ನಡೆದಿದೆ ಎಂದರು.

ಸಾಧಕರನ್ನು ಸನ್ಮಾನಿಸುವ ಸಂಪ್ರದಾಯ ನಮ್ಮದು. ಆದರೆ ಈ ಪುರಸ್ಕಾರಕ್ಕೆ ಅರ್ಹರಾಗಿರುವ ಇನ್ನೆಷ್ಟೋ ಮಂದಿ ಇದ್ದಾರೆ. ಎಲೆಮರೆಯ ಕಾಯಿಯ ಹಾಗಿರುವ ಸಾಧಕರ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರ ಹೆಸರು ಕಳುಹಿಸಿಕೊಡಿ. ಅವರನ್ನು ಗೌರವಿಸುತ್ತೇವೆ ಎಂದು ಮನವಿ ಮಾಡಿಕೊಂಡರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಧರ್ಮಸ್ಥಳದ ರತ್ನಮ್ಮ ಹೆಗ್ಗಡ್ತಿ ಅವರು ಸಾಧಕರನ್ನು ಗುರುತಿಸಿ ಪುರಸ್ಕರಿಸುವ ಸರಕಾರದ ಕೆಲಸವನ್ನು ಶ್ಲಾಘಿಸಿದರು. ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 55 ಮಂದಿ ಗಣ್ಯರನ್ನು ಶಾಲುಹೊದೆಸಿ, ಚಿನ್ನದ ಪದಕವಿತ್ತು ಮುಖ್ಯಮಂತ್ರಿ ಕೃಷ್ಣ ಸನ್ಮಾನಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+