ತೆವಳುತ್ತಿರುವ ಐಟಿ ಕಂಪನಿಗಳಿಗೆ ಮುಂದಿನ ವರ್ಷವೇ ಶುಕ್ರದೆಶೆ
ಬೆಂಗಳೂರು : ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ವಿತ್ತ ವರ್ಷದ ಮೂರನೇ ತ್ರೆೃಮಾಸಿಕದ ಹೊತ್ತಿಗೆ ಮಾಹಿತಿ ತಂತ್ರಜ್ಞಾನ ಮತ್ತೆ ಮೈದಡವಿಕೊಂಡು ಏಳಲಿದೆ ಎಂದು ಟಿಸಿಎಸ್, ನಾವೆಲ್, ಫಿಲಿಪ್ಸ್, ಸಿಸ್ಕೋ ಮೊದಲಾದ ಐಟಿ ಕಂಪನಿಗಳ ಸಿಇಓಗಳು ಒಟ್ಟಭಿಪ್ರಾಯ ಪಟ್ಟಿದ್ದಾರೆ.
ಗುರುವಾರ ಸಂಜೆ ಬೆಂಗಳೂರುಐಟಿ.ಕಾಂನಲ್ಲಿ ನಡೆದ ಸಿಇಓಗಳ ಸಮಾವೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪುನರವಲೋಕನ ನಡೆಯಿತು. ಪ್ರಸಕ್ತ ಸ್ಥಿತಿ-ಗತಿ ಬಗ್ಗೆ ಚರ್ಚೆ, ಮುಂದೆ ಕ್ಷೇತ್ರದ ಪುನರುತ್ಥಾನಕ್ಕೆ ಏನು ಮಾಡಬೇಕೆಂಬ ವಿಚಾರಗಳು ಕೇಳಿಬಂದವು. ಅದರ ಸಂಕ್ಷಿಪ್ತ ಸಾರ ಹೀಗಿದೆ...
- ಐಟಿ ಹಿನ್ನಡೆಯಿಂದ ಹೆಚ್ಚು ಜಾಗತಿಕ ಒಡಂಬಡಿಕೆ ಮಾತುಗಳು ಕೇಳಿಬರುತ್ತಿವೆ. ಪುನರುತ್ಥಾನವಾದರೆ, ಮೊದಲನೇ ವರ್ಷದಲ್ಲೇ ಜಗತ್ತಿನ 10 ಟಾಪ್ ಐಟಿ ಕಂಪನಿಗಳ ಪೈಕಿ ಒಂದಕ್ಕಿಂತ ಹೆಚ್ಚು ಭಾರತೀಯ ಕಂಪನಿಗಳು ಇರುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೊಸದಾಗಿ ಕಂಪನಿ ಪ್ರಾರಂಭಿಸುವವರಿಗೆ ಇದು ಒಳ್ಳೆ ಸಮಯ. ಸ್ಪರ್ಧೆಯ ತುರುಸು ಹೆಚ್ಚಿಲ್ಲ. ಜೊತೆಗೆ ಹಿಂದೆಂದಿಗಿಂತಲೂ ಅಗ್ಗದ ವೇತನಕ್ಕೆ ಪರಿಣತರು ಸಿಗುತ್ತಾರೆ. ಬಂಡವಾಳದಾರರು ಮಾತ್ರ ಚೂಸಿಯಾಗಿದ್ದಾರೆ. ಹೀಗಾಗಿ ಹೊಸದಾಗಿ ಕಂಪನಿ ತೆರೆಯುವವರು ಸೃಜನಶೀಲರಾಗಿರಬೇಕು- ನಂದನ್ ನೀಲೇಕನಿ, ಸಿಇಓ, ಇನ್ಫೋಸಿಸ್.
- ಚೀನಾದಂಥ ದೇಶದಲ್ಲಿ ಅಗ್ಗದ ಸಂಬಳಕ್ಕೇ ಜಗಜ್ಜಾಣರು ಕೆಲಸ ಮಾಡುತ್ತಿದ್ದಾರೆ. ಇದು ಎಲ್ಲಾ ಕಡೆ ಕಾಣಸಿಗದು. ಕಡಿಮೆ ಬಂಡವಾಳದಲ್ಲೇ ಹೆಚ್ಚು ಲಾಭ ಮಾಡುವ ಅವಕಾಶ ಚೀನಾಗೆ ಉಂಟು. ಹೀಗಾಗಿ ಬೇರೆ ದೇಶಗಳಿಗೆ ಇದೊಂದು ದೊಡ್ಡ ಸವಾಲಾಗಿದೆ- ಬಾಬ್ ಹೊೖಸ್ಟ್ರಾ, ಫಿಲಿಪ್ಸ್ ಸಾಫ್ಟ್ವೇರ್ ಸೆಂಟರ್.
- ಬಹುತೇಕ ಭಾರತೀಯ ಕಂಪನಿಗಳು ಗ್ರಾಹಕರಿಗೆ ಒಂದೇ ರೀತಿಯ ಸೇವೆ ನೀಡುತ್ತಿವೆ. ಗ್ರಾಹಕರೊಟ್ಟಿಗೆ ಮಾತಾಡಲು ಬಳಸುತ್ತಿರುವುದೂ ಒಂದೇ ಭಾಷೆ. ಇಲ್ಲಿ ಹೊಸತನ ಕೊಡಬೇಕು. ಸೇವಾ ವೈವಿಧ್ಯತೆಗೆ ಗಮನ ಹರಿಸಬೇಕು. ಆಯಾ ಗ್ರಾಹಕರ ಮನೆಮಾತಲ್ಲೇ ಅವರನ್ನು ತಲುಪುವ ಪ್ರಯತ್ನಗಳಾಗಬೇಕು- ರಮೇಶ್ ವೆಂಕಟರಾಮನ್, ಮೆಕ್ ಕಿನ್ಸೆ .
- ಸ್ಪರ್ಧೆಯ ಭರಾಟೆ ತಣ್ಣಗಾಗಿದೆ. ದೊಡ್ಡಾತಿದೊಡ್ಡ ಐಟಿ ಕಂಪನಿಗಳು ಉಸಿರಾಡುತ್ತಿವೆ. ಅವುಗಳ ಮಾರುಕಟ್ಟೆಯ ವ್ಯಾಪ್ತಿ ಕೂಡ ಬೆಳೆದಿದೆ. ಆದರೆ ಈ ಬೆಳವಣಿಗೆಯಿಂದ ಚೌಕಾಶಿ ಮಾಡುವ ಗ್ರಾಹಕರೇ ಹೆಚ್ಚು. ಸೇವಾ ಶುಲ್ಕ ಕಡಿಮೆ ಮಾಡಿ, ಒತ್ತಡವನ್ನು ತಡಕೊಂಡು, ತಾಳ್ಮೆಯಿಂದ ವ್ಯವಹರಿಸುವ ಕಂಪನಿಗಳಿಗೆ ಮಾತ್ರ ಇದು ಉಳಿಗಾಲ- ವಿವಿಧ ಕಂಪನಿಗಳ ಸಿಇಓಗಳು.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications