Get Updates
Get notified of breaking news, exclusive insights, and must-see stories!

ಬಿಜಾಪುರದ ರಾಯನಪಾಳ್ಯದಲ್ಲಿ ರಸ್ತೆ ಅಪಘಾತಕ್ಕೆ 25 ಮಂದಿ ಬಲಿ

ಬಿಜಾಪುರ: ಕೂಲಿಕಾರರನ್ನು ಹೊತ್ತೊಯ್ಯುತ್ತಿದ್ದ ಲಾರಿಯಾಂದು ಟ್ರಾಲಿಯಾಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ 25ಕ್ಕೂ ಹೆಚ್ಚು ಮಂದಿ ಮೃತರಾಗಿರುವ ದಾರುಣ ಘಟನೆ ಸುರಪುರ ತಾಲ್ಲೂಕಿನ ರಾಯನಪಾಳ್ಯದಲ್ಲಿ ಸಂಭವಿಸಿದೆ.

ಗುರುವಾರ ಮಧ್ಯರಾತ್ರಿ ರಾಯನಪಾಳ್ಯದಿಂದ ಮಹಾರಾಷ್ಟ್ರದ ಕಡೆಗೆ ಸುಮಾರು 50 ಮಂದಿ ಕೂಲಿಕಾರರನ್ನು ಕರೆದೊಯ್ಯುತ್ತಿದ್ದ ಮಿನಿಲಾರಿ , ಕಬ್ಬಿಣದ ಸರಕುಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಉರುಳಿ ಬಿದ್ದು ನಜ್ಜುಗುಜ್ಜಾಗಿದೆ.

ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯವನ್ನು ಆರಂಭಿಸಿದ್ದಾರೆ. ಅಪ್ಪಚ್ಚಿಯಾದ ವಾಹನದ ಅಡಿಯಿಂದ 25 ಶವಗಳನ್ನು ಮೇಲೆತ್ತಲಾಗಿದ್ದು ಮೃತಪಟ್ಟವರೆಲ್ಲರನ್ನೂ ಗುರುತಿಸುವುದು ಸಾಧ್ಯವಾಗಿಲ್ಲ. ದುರಂತ ಸಂಭವಿಸಿದ ಕೂಡಲೇ ಎರಡೂ ವಾಹನಗಳ ಚಾಲಕರು ಪರಾರಿಯಾಗಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+