ಆ್ಯಂಥ್ರಾಕ್ಸ್ /ಹೈಜಾಕ್ ಭೀತಿ;ನೈಪಾಲ್ ಬೆಂಗಳೂರು ಭೇಟಿ ರದ್ದು
ಬೆಂಗಳೂರು : ಪ್ರಸಕ್ತ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕೃತ ವಿ.ಎಸ್.ನೈಪಾಲ್ ಅವರನ್ನು ಕಾಣುವ ಬೆಂಗಳೂರಿಗರ ತವಕ ಸದ್ಯಕ್ಕೆ ಈಡೇರುವಂತೆ ಕಾಣುತ್ತಿಲ್ಲ . ಅಕ್ಟೋಬರ್ ಕೊನೆಯ ವಾರದಲ್ಲಿ ಬೆಂಗಳೂರು ಪ್ರವಾಸ ಕೈಗೊಳ್ಳಬೇಕಿದ್ದ ನೈಪಾಲ್ರ ಕಾರ್ಯಕ್ರಮ ರದ್ದಾಗಿದೆ.
ಅಕ್ಟೋಬರ್ ಕೊನೆಯ ವಾರದಲ್ಲಿ ನೈಪಾಲ್ ಅವರು ಬೆಂಗಳೂರಿಗೆ ಭೇಟಿ ನೀಡುವರೆಂದು ಬ್ರಿಟೀಷ್ ಕೌನ್ಸಿಲ್ ತನ್ನ ಸದಸ್ಯರಿಗೆ ವಾರ್ತಾಪತ್ರದ ಮೂಲಕ ತಿಳಿಸಿತ್ತು . ಆದರೆ, ವಿಶ್ವವ್ಯಾಪಿಯಾಗಿರುವ ಆ್ಯಂಥ್ರಾಕ್ಸ್ /ಹೈಜಾಕ್ ಭೀತಿಯಿಂದ ಬೆಂಗಳೂರು ಭೇಟಿ ಕಾರ್ಯಕ್ರಮವನ್ನು ನೈಪಾಲ್ ಕೈ ಬಿಟ್ಟಿದ್ದಾರೆ ಎಂದು ಎಕ್ಸೊಪ್ಲೊಸಿಟಿ.ಕಾಂ ವರದಿ ಮಾಡಿದೆ. ಇದರಿಂದಾಗಿ ನೈಪಾಲ್ರ ಇತ್ತೀಚಿನ ಕೃತಿ Half A Life ಹೊಂದುವ ಬ್ರಿಟೀಷ್ ಲೈಬ್ರರಿಯ ತವಕವೂ ಮುಂದಕ್ಕೆ ಹೋದಂತಾಗಿದೆ.
ಕೈಮೀರಿದ ಕಾರಣಗಳಿಗಾಗಿ ನೈಪಾಲ್ ಕಾರ್ಯಕ್ರಮ ರದ್ದಾಗಿದೆ. ಮುಂದಿನ ದಿನಾಂಕವನ್ನು ಗೊತ್ತು ಪಡಿಸಲಾಗುವುದು ಎಂದು ಬ್ರಿಟೀಷ್ ಲೈಬ್ರರಿ ಮೂಲಗಳು ತಿಳಿಸಿವೆ. ಅಂದಹಾಗೆ, ನೈಪಾಲ್ ಅವರ ಕೊನೆಯ ಬೆಂಗಳೂರು ಭೇಟಿ- ಜನವರಿ 1998 ರಲ್ಲಿ . ಆಗ ನೈಪಾಲ್ ಅವರು ಬೆಂಗಳೂರು ಕ್ಲಬ್ ಸದಸ್ಯರನ್ನುದ್ದೇಶಿಸಿ ಮಾತನಾಡಿದ್ದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...