ತ್ವರಿತ ಅಲರ್ಟ್ ಗಳಿಗಾಗಿ
For Daily Alerts
45 ಗಂಟೆ ನಾಟಕಕ್ಕೆ ತೆರೆ, ಮಸೀದಿಯಲ್ಲಿ ಅಡಗಿದ ಉಗ್ರನ ಅಂತ್ಯ
ಶ್ರೀನಗರ: ಬದ್ಗಾಂ ಜಿಲ್ಲೆಯ ಮಸೀದಿಯಾಂದರಲ್ಲಿ ಅಡಗಿಕೊಂಡಿದ್ದ ಲಷ್ಕರ್-ಇ-ತೊಯಿಬಾದ ಭಯೋತ್ಪಾದಕನನ್ನು ರಕ್ಷಣಾ ಪಡೆಯ ಯೋಧರು ಸೋಮವಾರ ಬೆಳಗ್ಗೆ ಕೊಲ್ಲುವುದರೊಂದಿಗೆ 45 ಗಂಟೆಗಳ ಕಾಲ ನಡೆದ ರಕ್ಷಣಾ ಪಡೆ ಹಾಗೂ ಉಗ್ರರ ನಡುವಣ ತಿಕ್ಕಾಟ ಕೊನೆಗೊಂಡಿದೆ.
ಮೂವರು ಗಡಿಭದ್ರತಾ ಪಡೆಯ ಅಧಿಕಾರಿಗಳು ಹಾಗೂ ವಿಶೇಷ ಪೊಲೀಸ್ ಅಧಿಕಾರಿ(ಎಸ್ಪಿಒ)ಯಾಬ್ಬರು ಘರ್ಷಣೆಯಲ್ಲಿ ಗಾಯಗೊಂಡಿದ್ದು , ಪ್ರಾರ್ಥನಾ ಮಂದಿರಕ್ಕೆ ಯಾವುದೇ ಹಾನಿಯಾಗಿಲ್ಲ . ತೊಯಿಬಾ ಉಗ್ರನನ್ನು ಗುಂಡಿಟ್ಟು ಕೊಂದ ನಂತರ ಸ್ಥಳೀಯ ಪೊಲೀಸರೊಂದಿಗೆ ಬಿಎಸ್ಎಫ್ ಮಸೀದಿಯ ಇಂಚಿಂಚನ್ನೂ ಶೋಧಿಸಿ, ಮಸೀದಿಯಾಳಗೆ ಇತರ ಯಾವುದೇ ಉಗ್ರರು ಅಡಗಿಕೊಂಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗಿದೆ.
ಬಾತ್ರೂಂನಲ್ಲಿ ಅಡಗಿಕೊಂಡಿದ್ದ ಉಗ್ರನ ಮೇಲೆ ಗುಂಡು ಹಾರಿಸಲಾಗಿದೆ. ಆದರೆ, ತೊಯಿಬಾ ಉಗ್ರ ಉಡಾಯಿಸಿದ ಗ್ರೆನೇಡ್ನಿಂದಾಗಿ ಮೂವರು ಸೈನಿಕರು ಗಾಯಗೊಂಡರು. ಮೃತ ಉಗ್ರನಿಂದ ಎಕೆ-47 ರೈಫಲ್ ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
(ಪಿಟಿಐ)
Comments
Story first published: Monday, October 29, 2001, 5:30 [IST]