ಪಾಕ್ಗೆ ನಿಯೋಗ ಕಳಿಸಿ: ವಿಶ್ವಸಂಸ್ಥೆಗೆ ಭಾರತೀಯ ಕ್ರಿಶ್ಚಿಯನ್ನರ ಆಗ್ರಹ
ಬೆಂಗಳೂರು: ಪಾಕಿಸ್ತಾನದ ಚರ್ಚೊಂದರಲ್ಲಿ 18 ಕ್ರಿಶ್ಚಿಯನ್ನರನ್ನು ಹತ್ಯೆಗೈದ ಬರ್ಬರ ಕೃತ್ಯದ ಬಗ್ಗೆ ತನಿಖೆ ನಡೆಸಲು ಹಾಗೂ ಪಾಕ್ನಲ್ಲಿನ ಅಲ್ಪಸಂಖ್ಯಾಕರಿಗೆ ರಕ್ಷಣೆ ಒದಗಿಸುವ ಕುರಿತು ಉನ್ನತ ಮಟ್ಟದ ನಿಯೋಗವೊಂದನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತೀಯ ಕ್ರಿಶ್ಚಿಯನ್ನರ ಜಾಗತಿಕ ಸಮಿತಿ (Global Council of Indian Christians) ವಿಶ್ವಸಂಸ್ಥೆಯನ್ನು ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರಿಗೆ ಕಳಿಸಿರುವ ಸಂದೇಶದಲ್ಲಿ , ಕ್ರಿಶ್ಚಿಯನ್ನರ ಹತ್ಯಾ ಪ್ರಕರಣದ ಬಗ್ಗೆ ತೀವ್ರ ದಿಗ್ಭ್ರಮೆ ಹಾಗೂ ಭೀತಿಯನ್ನು ಸಮಿತಿ ವ್ಯಕ್ತಪಡಿಸಿದೆ. ಬೆಹ್ವಾಲ್ಪುರ್-ಮುಲ್ತಾನ್ನ ಚರ್ಚ್ನಲ್ಲಿ ಭಕ್ತರ ಮೇಲೆ ನಡೆದ ದಾಳಿ ಭಯಾನಕವಾದುದು ಎಂದು ಸಮಿತಿ ಬಣ್ಣಿಸಿದೆ.
ಕ್ರಿಶ್ಚಿಯನ್ ಹಾಗೂ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಪಾಕಿಸ್ತಾನ ಆಡಳಿತ ತಳೆದಿರುವ ಶೀತಲ ಮೌನ ನಮಗೆ ನಿರಾಶೆ ಹಾಗೂ ಆಶ್ಚರ್ಯ ಉಂಟು ಮಾಡಿದೆ ಎಂದು ಹೇಳಿರುವ ಕ್ರಿಶ್ಚಿಯನ್ನರ ಸಮಿತಿ, ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಂಶಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಸಾಮಾನ್ಯ ಸಭೆಯ ಮುಂದೆ ಮಂಡಿಸುವಂತೆ ಕೋಫಿ ಅನ್ನಾನ್ ಅವರನ್ನು ಒತ್ತಾಯಿಸಿದೆ.
(ಪಿಟಿಐ)