Get Updates
Get notified of breaking news, exclusive insights, and must-see stories!

ಸಾಣೇಹಳ್ಳಿಯಲ್ಲಿ 8 ದಿನಗಳ ನಾಟಕೋತ್ಸವ, ವಿಚಾರ ಸಂಕಿರಣ

ಸಾಣೇಹಳ್ಳಿ : ಚಿತ್ರದುರ್ಗದ ತರಳಬಾಳು ಶಾಖಾ ಮಠದ ಶಿವಕುಮಾರ ಹವ್ಯಾಸೀ ಕಲಾ ಸಂಘವು ನವೆಂಬರ್‌ 1ರಿಂದ ಎಂಟು ದಿನಗಳ ಕಾಲ ವಿಚಾರ ಸಂಕಿರಣ ಹಾಗೂ ನಾಟಕೋತ್ಸವವನ್ನು ಆಯೋಜಿಸಿದೆ.

ನವೆಂಬರ್‌ ಒಂದರಿಂದ ಐದರವರೆಗೆ ಮಕ್ಕಳ ನಾಟಕೋತ್ಸವ, ಆರರಿಂದ 9ರವರೆಗೆ ಶಿವಸಂಚಾರ ತಂಡದ ನಾಟಕೋತ್ಸವ, ಏಳರಂದು ‘ಮತೀಯವಾದ , ಭಯೋತ್ಪಾದನೆ ಮತ್ತು ಧರ್ಮ’ ಕುರಿತ ವಿಚಾರ ಸಂಕಿರಣಗಳು ನಡೆಯಲಿವೆ.

ಮಕ್ಕಳ ನಾಟಕೋತ್ಸವವನ್ನು ನವೆಂಬರ್‌ 1ರ ಸಂಜೆ ನಾಟಕ ಅಕಾಡೆಮಿಯ ಅಧ್ಯಕ್ಷ ಆರ್‌. ನಾಗೇಶ್‌ ಉದ್ಘಾಟಿಸಲಿದ್ದು ಈ ಅವಧಿಯಲ್ಲಿ ಮೂಕನ ಮಕ್ಕಳು, ಪೋಲಿ ಗೊಂಬೆಯ ಜಾಲಿ ದಿನಗಳು, ಅಪ್ಪ, ಕಾರಣಿಕ ಶಿಶು, ಮತ್ತು ಪುಷ್ಪರಾಣಿ ನಾಟಕಗಳು ಪ್ರದರ್ಶಿತವಾಗಲಿವೆ. ಶಿವಸಂಚಾರ- 2001 ನಾಟಕೋತ್ಸವವನ್ನು ವಿಧಾನ ಪರಿಷತ್‌ ಸಭಾಪತಿ ಬಿ.ಎಲ್‌. ಶಂಕರ್‌ ಶುಭಾರಂಭ ಮಾಡಲಿದ್ದಾರೆ.

ನಾಟಕ ತಂಡ ಶಿವ ಸಂಚಾರ 1997ರಲ್ಲಿ ಆರಂಭವಾಗಿದ್ದು, ರಾಜ್ಯಾದ್ಯಂತ ವಿಚಾರ ಪ್ರಚೋದಕ ನಾಟಕ ಪ್ರದರ್ಶಿಸುತ್ತಾ ಬಂದಿದೆ. ಈ ವರ್ಷ ತಲೆದಂಡ, ಸಂತ್ಯಾಗ ನಿಂತಾನ ಕಬೀರ್‌ ಮತ್ತು ಸ್ವಾಮಿ ವಿವೇಕಾನಂದ ನಾಟಕಗಳನ್ನು ಪ್ರದರ್ಶನಕ್ಕೆ ಅಣಿಗೊಳಿಸಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+