ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಡ್ಯ ಬಳಿಯ ಕಲ್ಕುಣಿ ಕೆರೆಗೆ ಬಸ್ಸು ಮಗುಚಿ 20 ಸಾವು
ಕಲ್ಕುಣಿ : ಮಂಡ್ಯ ಸಮೀಪದ ಕಲ್ಕುಣಿ ಕೆರೆಗೆ ಖಾಸಗಿ ಬಸ್ಸು ಮಗುಚಿ ಬಿದ್ದು 20 ಮಂದಿ ಪ್ರಯಾಣಿಕರು ಮೃತರಾದ ದಾರುಣ ಘಟನೆ ವಿಜಯದಶಮಿ ದಿನವಾದ ಶುಕ್ರವಾರ ವರದಿಯಾಗಿದೆ.
ಮಹದೇಶ್ವರ ಹೆಸರಿನ ಖಾಸಗಿ ಬಸ್ಸಿನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಗುಂಡ್ಲುಪೇಟೆಯಿಂದ ನರಸೀಪುರ ಮಾರ್ಗವಾಗಿ ಮಂಡ್ಯಕ್ಕೆ ಹೊರಟಿದ್ದ ಈ ಬಸ್ಸು, ಸಂಜೆ ಐದೂವರೆಗೆ ಕೆರೆಯಾಳಗೆ ಬಿದ್ದು ಎರಡು ಪಲ್ಟಿ ಹೊಡೆದು ನಿಂತಿತು.
ಮೃತರ ಪೈಕಿ ಚಾಮರಾಜ ನಗರದ ಉಮ್ಮಚ್ಚವಾಡಿ ಗ್ರಾಮದ ರಾಜಮ್ಮ(28), ಚಾಂದಿನಿ(3), ಮತ್ತು ಕಲ್ಕುಣಿ ಗ್ರಾಮದ ಮಹಮದ್ ಆರೂರ್(22), ಶಶಿ(3), ಪುಟ್ಟಸ್ವಾಮಿ ಉರುಫ್ ಗೌತಮ್(6) ಎಂಬವರನ್ನು ಗುರುತಿಸಲಾಗಿದೆ. ಇನ್ನುಳಿದ ಮೃತ ದೇಹಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Saturday, October 27, 2001, 5:30 [IST]