Get Updates
Get notified of breaking news, exclusive insights, and must-see stories!

ಬದಿಯಡ್ಕ: ಹವ್ಯಕ ಕವನ ಸಂಕಲನ ‘ಒಂದಿಷ್ಟು ಕುಟುಕುಟು’ ಅನಾವರಣ

ಕಾಸರಗೋಡು : ಶಂ.ಪಾ. ದೈತೋಟ ಅವರ ‘ಒಂದಿಷ್ಟು ಕುಟುಕುಟು’ ಹವ್ಯಕ ಕವನ ಸಂಕಲನವನ್ನು ಬುಧವಾರ ಬದಿಯಡ್ಕದಲ್ಲಿ ಪ್ರೊ. ಬಿ.ವಿ. ಅರ್ತಿಕಜೆ ಬಿಡುಗಡೆ ಮಾಡಿದರು.

ಕಾಸರಗೋಡು ಜಿಲ್ಲಾ ಹೈವ ಬ್ರಾಹ್ಮಣ ಯುವ ವೇದಿಕೆ, ಬದಿಯಡ್ಕ ಭಾರತೀ ವಿದ್ಯಾಪೀಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅರ್ತಿಕಜೆ ಅವರು ಹವ್ಯಕ ನುಡಿಕಟ್ಟು , ಆಡು ಭಾಷೆಯ ಶಬ್ದಗಳನ್ನು ಬಳಸಿಕೊಂಡು ಚಿಕಿತ್ಸಕ ದೃಷ್ಠಿಯಿಂದ ಹನಿಗವನ ಮತ್ತು ನೀಳ್ಗವನಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಹವ್ಯಕ ಭಾಷೆಯಲ್ಲಿರುವ ಕವನಗಳಾದರೂ ಇವು ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡಿದೆ ಎಂದ ಅವರು ಸಾಹಿತ್ಯದಲ್ಲಿ ಸಾತ್ವಿಕ ರೋಷ ವ್ಯಕ್ತವಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗಾಗಿ ಹನಿಗವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹವ್ಯಕ ವೇದಿಕೆಯ ಅಧ್ಯಕ್ಷ ಡಾ. ವಿ.ವಿ. ರಮಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+