ತ್ವರಿತ ಅಲರ್ಟ್ ಗಳಿಗಾಗಿ
For Daily Alerts
13 ಸಾವಿರ ಸರ್ಕಾರಿನೌಕರರ ಉದ್ಯೋಗ ತೂಗುಯ್ಯಾಲೆಯಲ್ಲಿ ?
ಬೆಂಗಳೂರು: 1998 ರ ನಂತರ ಗ್ರಾಮೀಣ ಕೃಪಾಂಕದ ಆಧಾರದ ಮೇಲೆ ರಾಜ್ಯ ಸರ್ಕಾರ ಮಾಡಿಕೊಂಡ ಉದ್ಯೋಗ ನೇಮಕಾತಿಗಳನ್ನು ಸುಪ್ರಿಂಕೋರ್ಟ್ನ ವಿಭಾಗೀಯ ಪೀಠ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಸುಮಾರು 13 ಸಾವಿರ ನೌಕರರು ನೇಮಕಾತಿ ರದ್ದಾಗುವ ಭೀತಿ ಎದುರಿಸುತ್ತಿದ್ದಾರೆ.
ಸುಪ್ರಿಂಕೋರ್ಟ್ ತೀರ್ಪಿನ ಪ್ರತಿ ಈಗಷ್ಟೇ ಸರ್ಕಾರದ ಕೈ ಸೇರಿದ್ದು, ತೀರ್ಪಿನ ಪರಿಣಾಮಗಳ ಬಗ್ಗೆ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಸುಪ್ರಿಂಕೋರ್ಟ್ ತೀರ್ಪಿನ ಅನ್ವಯ 1998 ರ ನಂತರದ ನೇಮಕಾತಿಗಳ ಬಗೆಗೆ ಸರ್ಕಾರ ಪುನರ್ ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಾರ್ತಾ ಸಚಿವ ಬಿ.ಕೆ.ಚಂದ್ರಶೇಖರ್ ತಿಳಿಸಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, ಕರ್ನಾಟಕ ನಾಗರಿಕ ಸೇವೆಗಳ ನೇಮಕ ನಿಯಮಾವಳಿ 3 (ಬಿ) ಪ್ರಕಾರ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಸುಮಾರು 13 ಸಾವಿರ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿತ್ತು .
(ಇನ್ಫೋ ವಾರ್ತೆ)
Comments
Story first published: Tuesday, October 23, 2001, 5:30 [IST]