ತುಂಗಭದ್ರಾ ಜಲಾಶಯ ತುಂಬಲು ಒಂದಡಿ ನೀರು ಸಾಕು
ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಆರಂಭದಲ್ಲಿ ಕೈಕೊಟ್ಟರೂ, ಈಗ ಬಲಗೊಂಡಿದೆ. ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಕಾರಣ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ತುಂಗಭದ್ರಾ ಹೆಚ್ಚೂ ಕಡಿಮೆ ಸಂಪೂರ್ಣ ತುಂಬಿ ಹೋಗಿದೆ.
1633 ಅಡಿ ಗರಿಷ್ಠ ಮಟ್ಟದ ತುಂಗಭದ್ರಾ ಜಲಾಶಯದಲ್ಲಿ ಈ ಹೊತ್ತು 1631.64 ಅಡಿ ನೀರಿದೆ. ಜಲಾಶಯಕ್ಕೆ ಬರುತ್ತಿರುವ ನೀರಿನ ಒಳಹರಿವಿನ ಪ್ರಮಾಣವೂ ಗಣನೀಯವಾಗಿ ಹೆಚ್ಚಿದೆ. ನೀರಿನ ಮಟ್ಟ ಅಪಾಯದ ಮಟ್ಟದಲ್ಲಿರುವುದರಿಂದ ಯಾವುದೇ ಕ್ಷಣದಲ್ಲಿ ಕ್ರೆಸ್ಟ್ ಗೆಟ್ ತೆರೆದು ನೀರನ್ನು ನದಿಗೆ ಬಿಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಜಲಾಶಯದ ತಗ್ಗು ಪ್ರದೇಶದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಜಾವೇದ್ ಅಕ್ತರ್ ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ:
ಜಲಾಶಯ | ಗ-ರಿ-ಷ್ಠ ಮಟ್ಟ | ಇಂದಿ-ನ-ಮ-ಟ್ಟ |
ಲಿಂಗ-ನ-ಮ--ಕ್ಕಿ | 1819.00 ಅಡಿಗಳು | 1792.40ಅಡಿಗಳು |
ವಾರಾಹಿ | 1950.00 ಅಡಿಗಳು | 1929.13ಅಡಿಗಳು |
ತುಂಗಭದ್ರಾ | 1633.00 ಅಡಿಗಳು | 1631.64 ಅಡಿಗಳು |
ಕೆಆರ್ಎಸ್ | 124.80 ಅಡಿಗಳು | 119.22ಅಡಿಗಳು |