Get Updates
Get notified of breaking news, exclusive insights, and must-see stories!

ಕನ್ನಡ ಮಾಧ್ಯಮದವರಿಗೆ ಶೇ.5ರಷ್ಟು ಉದ್ಯೋಗ ಮೀಸಲು:ಪರಿಶೀಲನೆ

ಬೆಂಗಳೂರು : ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ, ರಾಜ್ಯ ಸರಕಾರಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಶೇ.5ರಷ್ಟು ಮೀಸಲಾತಿ ನೀಡುವ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ.

ಈ ಸಂಬಂಧ ಬರಗೂರು ರಾಮಚಂದ್ರಪ್ಪ ಅವರು ನೀಡಿರುವ ವರದಿಯನ್ನು ಸರಕಾರ ಪರಾಮರ್ಶಿಸುತ್ತಿದ್ದು, ಕನ್ನಡ ಮಾಧ್ಯಮದವರಿಗೆ ಉದ್ಯೋಗ ಮೀಸಲು ನೀಡುವ ವಿಚಾರ ಸರಕಾರದ ಕ್ರಿಯಾತ್ಮಕ ಪರಿಗಣನೆಯಲ್ಲಿದೆ ಎಂದು ಮುಖ್ಯಮಂತ್ರಿ ಕೃಷ್ಣ ತಿಳಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರ, ‘ಸಂಸ್ಕೃತಿ’ ಮತ್ತು ‘ಕಾಂಟೆಸ್ಸಾದಲ್ಲಿ ಕಾವ್ಯ’ ಎಂಬ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ಈ ಸಂಬಂಧ ಶೀಘ್ರವೇ ಸೂಕ್ತ ನಿರ್ಧಾರ ಪ್ರಕಟಿಸುವ ಭರವಸೆ ನೀಡಿದರು.

ಈಗಾಗಲೇ ವೃತ್ತಿ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮೀಸಲು ನೀಡಲಾಗಿದೆ ಎಂದರು. ಪ್ರಜಾಪ್ರಭುತ್ವದಲ್ಲಿ ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ಸಾಂಸ್ಕೃತಿಕ ಕ್ಷೇತ್ರದ ಸವಾಲುಗಳೂ ದೊಡ್ಡದಾಗಿವೆ. ಸಮಾಜ ಸಂಸ್ಕೃತಿಗೆ ಮನುಷ್ಯನೇ ಮುಖ್ಯ. ಸಮಾಜ - ಸಂಸ್ಕೃತಿ ಬಿಟ್ಟು ಮನುಷ್ಯ ಬದುಕಲು ಸಾಧ್ಯವೇ ಇಲ್ಲ ಎಂದು ಬರಗೂರರ ಪುಸ್ತಕ ಸಂಸ್ಕೃತಿಯನ್ನು ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬರಗೂರರು, ಅಧಿಕಾರಾಸನದಲ್ಲಿ ಕುಳಿತಾದ ಸೃಜನಶೀಲತೆ ಕಳೆದುಕೊಳ್ಳಬಾರದು. ಅಧಿಕಾರಸ್ಥರು ತಮ್ಮ ಒಳ ಎಚ್ಚರ ಕಾಪಾಡಿಕೊಂಡರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳಿತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿ ಜಿ.ಎಸ್‌. ಶಿವರುದ್ರಪ್ಪ ಅವರು, ಪುಸ್ತಕದೊಂದಿಗೆ ಸಂವಾದ ಮಾಡುವಾಗ ದೊರಕುವ ತೃಪ್ತಿ, ಸಂತೋಷ ಮತ್ತಾವ ಮಾಧ್ಯಮದಲ್ಲೂ ಸಿಗಲಾರದು. ಹೀಗಾಗೇ ಪುಸ್ತಕ ಮಾಧ್ಯಮಕ್ಕೆ ಎಂದೂ ಅಳಿವಿಲ್ಲ ಎಂದು ತಿಳಿಸಿದರು. ಸಚಿವೆ ರಾಣಿ ಸತೀಶ್‌, ಡಾ. ಕೆ.ವಿ. ನಾರಾಯಣ್‌ ಸಮಾರಂಭದಲ್ಲಿ ಪಾಲ್ಲೊಂಡಿದ್ದರು.

(ಇನ್‌ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+