Get Updates
Get notified of breaking news, exclusive insights, and must-see stories!

ಪಂಡಿತ ಆರ್‌.ಕೆ.ಬಿಜಾಪುರ್‌ಅವರಿಗೆ ಸಂಗೀತ ವಿದ್ವಾನ್‌ ಪುರಸ್ಕಾರ

ಬೆಂಗಳೂರು: ಹಿಂದೂಸ್ಥಾನಿ ವಾದ್ಯ ಸಂಗೀತ ಕ್ಷೇತ್ರದ ಪ್ರಸಿದ್ಧ ಹಾರ್ಮೋನಿಯಂ ಹಾಗೂ ತಬಲಾ ವಿದ್ವಾಂಸ ಪಂಡಿತ ಆರ್‌.ಕೆ. ಬಿಜಾಪುರ್‌ ಅವರನ್ನು ಈ ವರ್ಷದ ‘ರಾಜ್ಯ ಸಂಗೀತ ವಿದ್ವಾನ್‌’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಕ್ಟೋಬರ್‌ 25ರಂದು ಮೈಸೂರು ಅರಮನೆ ಮೈದಾನದಲ್ಲಿ ಆರ್‌. ಕೆ. ಅವರಿಗೆ ಸಂಗೀತ ವಿದ್ವಾನ್‌ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

1917ರಲ್ಲಿ ಅಥಣಿ ತಾಲ್ಲೂಕಿನ ಕಾಗವಾಡದಲ್ಲಿ ಹುಟ್ಟಿದ ಬಿಜಾಪುರ್‌, ತಂದೆ ಬಿಜಾಪುರ್‌ ಕಲೋಪಂತ್‌ಅವರ ಪ್ರೋತ್ಸಾಹದಿಂದ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು. ಹೈದರಾಬಾದ್‌ ಆಕಾಶವಾಣಿ, ಶಿರಹಟ್ಟಿ ನಾಟಕ ಕಂಪೆನಿ ಮತ್ತು ಎಚ್‌ಎಂವಿ ಧ್ವನಿ ಸಂಸ್ಥೆಯಲ್ಲಿ ಹಾರ್ಮೋನಿಯಂ ವಾದಕರಾಗಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದರು.

ಶ್ರೀರಾಮ ಸಂಗೀತ ವಿದ್ಯಾಲಯದ ಸ್ಥಾಪಿಸಿ, ಸಂಗೀತಾಸಕ್ತರಿಗೆ ಮಾರ್ಗದರ್ಶನ ನೀಡುತ್ತಿರುವ ಆರ್‌.ಕೆ. ಅವರಿಗೆ ಕರ್ನಾಟಕ ಕಲಾತಿಲಕ ಪ್ರಶಸ್ತಿಯೂ ದೊರೆತಿದೆ.

(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+