ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಟಾದ ಅಡಿಕೆ ದಲ್ಲಾಳಿ ಗಣೇಶಪರಮೇಶ್ವರ ಭಟ್ಟರು ಇನ್ನಿಲ್ಲ

By Staff
|
Google Oneindia Kannada News

ಕುಮಟಾ : ಸ್ವಾತಂತ್ರ ಹೋರಾಟಗಾರ, ಜಿಲ್ಲೆಯ ಪ್ರಸಿದ್ಧ ಅಡಿಕೆ ದಲ್ಲಾಳಿ ಹಾಗೂ ವ್ಯಾಪಾರಿಯಾಗಿದ್ದ ಗಣೇಶ ಪರಮೇಶ್ವರ ಭಟ್ಟ ಹಂದಿಗೋಣ ಅವರು ಸೋಮವಾರ ನಿಧನರಾಗಿದ್ದಾರೆ.

ಕಳೆದ ಐವತ್ತು ವರ್ಷಗಳಿಂದ ಅಡಿಕೆ ಮಂಡಿಯನ್ನು ನಡೆಸುತ್ತಿದ್ದ ಗಣೇಶ ಭಟ್ಟರು, ಕುಮಟಾದ ಅಡಿಕೆ ದಲ್ಲಾಳಿ ಮತ್ತು ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಾಗರ ಪ್ರಾಂತ್ಯದಲ್ಲಿಯೂ ಗಣೇಶ ಭಟ್ಟರು ಅಡಿಕೆ ಮಂಡಿಗಳನ್ನು ನಡೆಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮೃತರು ಎರಡು ಬಾರಿ ಸೆರೆಮನೆ ವಾಸ ಅನುಭವಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಭೂಗತ ಚಟುವಟಿಕೆಗಳಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದರು.

ಗಣೇಶ ಭಟ್ಟರ ನಿಧನಕ್ಕೆ ಕುಮಟಾ ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುರಲೀಧರ ಯಶವಂತ ಪ್ರಭು ಸಂತಾಪ ವ್ಯಕ್ತ ಪಡಿಸಿದ್ದು, ಮೃತರ ಗೌರವಾರ್ಥ ಅಕ್ಟೋಬರ್‌ 17ರಂದು ಕುಮಟಾದಲ್ಲಿ ಅಡಿಕೆ ವ್ಯಾಪಾರ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X