For Daily Alerts
ಕುಮಟಾದ ಅಡಿಕೆ ದಲ್ಲಾಳಿ ಗಣೇಶಪರಮೇಶ್ವರ ಭಟ್ಟರು ಇನ್ನಿಲ್ಲ
ಕುಮಟಾ : ಸ್ವಾತಂತ್ರ ಹೋರಾಟಗಾರ, ಜಿಲ್ಲೆಯ ಪ್ರಸಿದ್ಧ ಅಡಿಕೆ ದಲ್ಲಾಳಿ ಹಾಗೂ ವ್ಯಾಪಾರಿಯಾಗಿದ್ದ ಗಣೇಶ ಪರಮೇಶ್ವರ ಭಟ್ಟ ಹಂದಿಗೋಣ ಅವರು ಸೋಮವಾರ ನಿಧನರಾಗಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ಅಡಿಕೆ ಮಂಡಿಯನ್ನು ನಡೆಸುತ್ತಿದ್ದ ಗಣೇಶ ಭಟ್ಟರು, ಕುಮಟಾದ ಅಡಿಕೆ ದಲ್ಲಾಳಿ ಮತ್ತು ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಾಗರ ಪ್ರಾಂತ್ಯದಲ್ಲಿಯೂ ಗಣೇಶ ಭಟ್ಟರು ಅಡಿಕೆ ಮಂಡಿಗಳನ್ನು ನಡೆಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮೃತರು ಎರಡು ಬಾರಿ ಸೆರೆಮನೆ ವಾಸ ಅನುಭವಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಭೂಗತ ಚಟುವಟಿಕೆಗಳಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದರು.
ಗಣೇಶ ಭಟ್ಟರ ನಿಧನಕ್ಕೆ ಕುಮಟಾ ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುರಲೀಧರ ಯಶವಂತ ಪ್ರಭು ಸಂತಾಪ ವ್ಯಕ್ತ ಪಡಿಸಿದ್ದು, ಮೃತರ ಗೌರವಾರ್ಥ ಅಕ್ಟೋಬರ್ 17ರಂದು ಕುಮಟಾದಲ್ಲಿ ಅಡಿಕೆ ವ್ಯಾಪಾರ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
Story first published: Tuesday, October 16, 2001, 5:30 [IST]