ನೀನಾಸಂ ತಿರುಗಾಟ ಶುರು, ಅ. 22 ರಿಂದ ಬೆಂಗಳೂರಿನಲ್ಲಿ ಬಿಡಾರ
ಬೆಂಗಳೂರು : ಜಡ ಕಟ್ಟಿದ ಕನ್ನಡ ರಂಗಭೂಮಿಯಲ್ಲೊಂದು ಚಲನೆ ಉಂಟು ಮಾಡಿದ ಹೆಗ್ಗೋಡಿನ ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ) ತನ್ನ ವಾರ್ಷಿಕ ಸಂಪ್ರದಾಯದಂತೆ ತಿರುಗಾಟ ಪ್ರಾರಂಭಿಸಿದೆ. ಈ ತಿರುಗಾಟದ ಪ್ರಯುಕ್ತ ಅಕ್ಟೋಬರ್ 22 ರಿಂದ 24ರವರೆಗೆ ಬೆಂಗಳೂರಿನಲ್ಲಿ ನೀನಾಸಂ ಬಿಡಾರ.
ಜಯನಗರದ ಎಚ್. ಎನ್. ಕಲಾಕ್ಷೇತ್ರದಲ್ಲಿ ಪ್ರತಿದಿನ ಸಂಜೆ 6.30ರಿಂದ ನಾಟಕಗಳು ನಡೆಯಲಿವೆ. ನಗರದ ಲಲಿತ ಕಲಾ ಪರಿಷತ್ ನಾಟಕಗಳನ್ನು ಪ್ರಾಯೋಜಿಸಿದೆ. ನಾಟಕದ ವಿವರಗಳು ಹಾಗೂ ದಿನಾಂಕವನ್ನು ನಿಮ್ಮ ಡೈರಿಯಲ್ಲಿ ಗುರುತು ಹಾಕಿಕೊಳ್ಳಿ. ನಿಮ್ಮ ಸಾಂಸ್ಕೃತಿಕ ಜಡಕ್ಕೆ ಮೂರು ದಿನಗಳ ಈ ರಂಗ ಕವಳಕ್ಕಿಂಥ ಸೂಕ್ತ ಮದ್ದು ಇನ್ನೊಂದಿರಲಾರದು.
ನೀನಾಸಂ ಬೆಂಗಳೂರು ಬಿಡಾರದ ಚಟುವಟಿಕೆ-
ಅಕ್ಟೋಬರ್ 22 - ಪ್ರಮೀಳಾರ್ಜುನೀಯಂ, ನಿರ್ದೇಶನ : ಎಂ. ಎಲ್. ಶ್ರೀಕಾಂತೇಶ ಗೌಡ ಮತ್ತು ಬಿ.ಆರ್. ವೆಂಕಟರಮಣ ಐತಾಳ
ಅಕ್ಟೋಬರ್
23-
ಕಾಳಿದಾಸನ
ಮಾಳವಿಕಾಗ್ನಿ
ಮಿತ್ರವನ್ನು
ಆಧರಿತ,
ಕೆ.ವಿ
.
ಸುಬ್ಬಣ
ಅನುವಾದಿತ
ವಿಧಿಶೇಯ
ವಿದೂಷಕ,
ನಿರ್ದೇಶನ
:
ಇಕ್ಬಾಲ್
ಅಹ್ಮದ್
ಅಕ್ಟೋಬರ್
24-
ಕತ್ತಲೆಗೆ
ಹತ್ತುತಲೆ,
ಮೂಲ
ಲಿಯೋಟಾಲ್ಸ್ಟಾಯ್,
ನಿರ್ದೇಶನ
:
ಚಿದಂಬರ
ರಾವ್
ಜಂಬೆ.
(ಇನ್ಫೋ ವಾರ್ತೆ)