ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಸರಾ-ದೀಪಾವಳಿ ಸಂಭ್ರಮ, ಅಬ್ಬರದ ಪಟಾಕಿಗಳಿಗೆ ಪೊಲೀಸ್ ಲಗಾಮು
ಬೆಂಗಳೂರು : ಪರಿಸರವನ್ನು ಕಲುಷಿತಗೊಳಿಸುವ ಸಿಡಿಮದ್ದು , ಬಿರುಸು ಬಾಣಗಳನ್ನು ದಸರಾ ಹಾಗೂ ದೀಪಾವಳಿ ಪ್ರಯುಕ್ತ ತಯಾರಿಸಲು ಹಾಗೂ ಬಳಸಲು ನಗರ ಪೊಲೀಸ್ ಕಮೀಷನರ್ ಟಿ. ಮಡಿಯಾಳ್ ನಿಷೇಧ ಹೇರಿದ್ದಾರೆ. ಸುಪ್ರಿಂಕೋರ್ಟ್ ಸೂಚನೆ ಅನುಸಾರ ಈ ನಿಷೇಧ ಹೇರಲಾಗಿದೆ.
ಕರ್ಕಶ ಶಬ್ದ ಉಂಟುಮಾಡುವ ಪಟಾಕಿಗಳನ್ನು ತಯಾರಿಸದಂತೆ ಕೂಡ ಸಿಡಿಮದ್ದು ತಯಾರಕರಿಗೆ ನಿರ್ದೇಶನ ನೀಡಿರುವ ಮಡಿಯಾಳ್, ನಿಷೇಧ ಹೇರಿರುವ ಪಟಾಕಿಗಳನ್ನು ಖರೀದಿಸದಂತೆ ಸಗಟು ಪಟಾಕಿ ಮಾರಾಟಗಾರರಿಗೆ ಸೂಚಿಸಿದ್ದಾರೆ. ನಿರ್ದೇಶನಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Saturday, October 13, 2001, 5:30 [IST]