ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಏಳು ಯಕ್ಷಗಾನ ಪ್ರಸಂಗಗಳಿಗೆ ಸೆಷನ್ಸ್ ನ್ಯಾಯಾಲಯದಿಂದ ತಡೆಯಾಜ್ಞೆ
ಉಡುಪಿ : ಡಾ. ಶಿವರಾಮ ಕಾರಂತರು ನಿರ್ದೇಶಿಸಿದ್ದ ಯಕ್ಷರಂಗದ ಏಳು ಪ್ರಸಂಗಗಳನ್ನು ಪ್ರದರ್ಶಿಸಬಾರದೆಂದು ಉಡುಪಿ ಯಕ್ಷಗಾನ ಕೇಂದ್ರದ ಕಲಾವಿದರ ತಂಡಕ್ಕೆ ಮಂಗಳೂರಿನ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಈ ಕುರಿತ ಮುಂದಿನ ವಿಚಾರಣೆ ನವೆಂಬರ್ ಏಳರಂದು ನಡೆಯಲಿದೆ. ನ್ಯಾಯಾಧೀಶ ಎಂ. ಎಸ್. ಬಾಲಕೃಷ್ಣ ಅವರು ಬುಧವಾರ ನೀಡಿದ ಆದೇಶದಲ್ಲಿ ಕಾರಂತರು ನಿರ್ದೇಶಿಸಿದ ಭೀಷ್ಮ ವಿಜಯ, ಅಭಿಮನ್ಯು ವಧೆ, ಕನಕಾಂಗಿ, ನಳ ದಮಯಂತಿ, ಚಿತ್ರಾಂಗದೆ, ಪಂಚವಟಿ ಹಾಗೂ ಗಯ ಚರಿತ್ರೆ ಪ್ರಸಂಗಗಳನ್ನು ಪ್ರದರ್ಶಿಸಬಾರದು ಎಂದು ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Friday, October 12, 2001, 5:30 [IST]