ಭಾರತೀಯ ಮೂಲದ ನೈಪಾಲ್ಗೆ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ
ಸ್ಟಾಕ್ಹೋಂ: ಭಾರತೀಯ ಮೂಲದ ಟ್ರಿನಿಡ್ಯಾಡ್ ಸಂಜಾತ ಇಂಗ್ಲಿಷ್ ಲೇಖಕ ವಿದ್ಯಾಧರ ಸೂರಜ್ಪ್ರಸಾದ್ ನೈಪಾಲ್ ಸಾಹಿತ್ಯ ಕ್ಷೇತ್ರದ ನೊಬೆಲ್ -2001 ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸ್ವೀಡಿಷ್ ವಿಜ್ಞಾನ ಅಕಾಡಮಿಯ ಪತ್ರಿಕಾ ಹೇಳಿಕೆ ಈ ವಿಷಯ ತಿಳಿಸಿದೆ.
ನೂರಾರು ಅತ್ಯುನ್ನತ ಪ್ರಶಸ್ತಿ - ಪುರಸ್ಕಾರಗಳಿಗೆ ಪಾತ್ರರಾಗಿರುವ 69 ವರ್ಷ ವಯಸ್ಸಿನ ನೈಪಾಲ್ ಅವರ ಸಾಧನೆಗೆ ಸಾಹಿತ್ಯ ಜಗತ್ತಿನ ಪರಮೋಚ್ಚ ಪ್ರಶಸ್ತಿ ಸಂದಿದೆ. ಟ್ರಿನಿಡ್ಯಾಡ್ನಲ್ಲಿ ಜನಿಸಿದ ನೈಪಾಲ್ ಅವರ ತಂದೆ ಭಾರತೀಯ ನಾಗರಿಕ ಸೇವೆಯಲ್ಲಿ ಅಧಿಕಾರಿ ಆಗಿದ್ದವರು.
1950ರಿಂದಲೂ ಇಂಗ್ಲೆಂಡ್ನಲ್ಲಿ ನೆಲೆಸಿರುವ ನೈಪಾಲ್, ತಮ್ಮ ಬದುಕಿನ ಬಹುಕಾಲವನ್ನು ವಿಶ್ವಪರ್ಯಟನೆಗೇ ಮೀಸಲಿಟ್ಟ ವರು. ಮೂಲತಃ ಶೋಧಕ ಪ್ರವೃತ್ತಿಯ ನೈಪಾಲ್ ಅವರ ಸಾಹಿತ್ಯ ಕೃಷಿಗೆ ಸ್ಫೂರ್ತಿಹಾಗೂ ಸಾಮಗ್ರಿ ದೊರೆತದ್ದು ಅವಿರತ ಪ್ರವಾಸದಿಂದಲೇ.
ಇವರ ಮೊದಲ ಮೇರು ಕೃತಿ ‘ಎ ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್’. ಈ ಕೃತಿಯಲ್ಲಿ ಅವರು, ಭಾರತದಿಂದ ಕೆರೆಬಿಯನ್ಗೆ ವಲಸೆಹೋದವರು ತಮ್ಮ ನೆಲೆಗಳೊಂದಿಗಿನ ಸಂಬಂಧಗಳನ್ನು ಕಳಚಿಕೊಳ್ಳದೆ, ಬೇರೊಂದು ಸಂಸ್ಕೃತಿಗೆ ಒಗ್ಗಿಕೊಳ್ಳುವ ಪರಿಪಾಟಲುಗಳನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ.
ನೈಪಾಲರು ಸೃಷ್ಟಿಸಿದ ಕೆಲವು ಸಾಹಿತ್ಯಕ ಮೈಲುಗಲ್ಲುಗಳು....
- The Mystic Masseur. London: Deutsch, 1957.
- Miguel Street. London: Deutsch, 1959.
- A House for Mr. Biswas. London: Deutsch, 1961.
- The Middle Passage : Impressions of Five Societies British, French and Dutch in the West Indies and South America. London: Deutsch, 1962.
- Mr Stone and the Knights Companion. London: Deutsch, 1963.
- A Flag on the Island. London: Deutsch, 1967.
- The Loss of El Dorado: A History. London: Deutsch, 1969.
- In a Free State. London: Deutsch, 1971.
- The Overcrowded Barracoon and Other Articles. London: Deutsch, 1972.
- India : A Wounded Civilization. London: Deutsch, 1977.
- A Bend in the River. London: Deutsch, 1979.
- A Congo Diary. Los Angeles, CA: Sylvester
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications