ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಪಾಲರಿಗೆ ಪತಿ ವಿಯೋಗ, ಸರೋಜದೇವಿಗೆನಾಡಹಬ್ಬದ ಉದ್ಘಾಟನಾ ಯೋಗ
ಬೆಂಗಳೂರು : ಈ ಮುನ್ನ ನಿಗದಿಪಡಿಸಿದಂತೆ ಜಗತ್ಪ್ರಸಿದ್ಧ ದಸರಾ ಮಹೋತ್ಸವವನ್ನು ರಾಜ್ಯಪಾಲರಾದ ವಿ.ಎಸ್.ರಮಾದೇವಿ ಅವರ ಬದಲಿಗೆ ಖ್ಯಾತ ಸಿನಿಮಾ ನಟಿ ಬಿ. ಸರೋಜಾ ದೇವಿ ಉದ್ಘಾಟಿಸುವರು.
ರಾಜ್ಯಪಾಲರಾದ ವಿ.ಎಸ್.ರಮಾದೇವಿ ಅವರಿಗೆ ಕಳೆದ ಸೋಮವಾರದಂದು ಪತಿ ವಿಯೋಗವಾದ ಕಾರಣ ಈ ಬಾರಿಯ ಉತ್ಸವ ಉದ್ಘಾಟನೆಗೆ ಆಗಮಿಸುವ ಕಾರ್ಯಕ್ರಮವನ್ನು ಅವರು ರದ್ದುಗೊಳಿಸಿದ್ದಾರೆ.
ಚಿತ್ರತಾರೆ ಸರೋಜಾ ದೇವಿ ಅವರು ಅಕ್ಟೋಬರ್ 17ರಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾ ಉತ್ಸವಕ್ಕೆ ಚಾಲನೆ ನೀಡುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Story first published: Thursday, October 11, 2001, 5:30 [IST]