ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚನ್ನಪಟ್ಟಣ ಬಂದ್: ಪೊಲೀಸರಿಂದ ಗೋಲಿಬಾರ್, ಓರ್ವನ ಸಾವು
ಚನ್ನಪಟ್ಟಣ : ನೀರಾ ಮಾರಾಟಕ್ಕೆ ಅನುಮತಿ ನೀಡುವಂತೆ ಮಂಗಳವಾರ ಕರೆ ನೀಡಿದ್ದ ಚನ್ನಪಟ್ಟಣ ಬಂದ್ ಹಿಂಸಾಚಾರಕ್ಕೆ ತಿರುಗಿದ್ದು , ಗುಂಪು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರ್ಗೆ ಓರ್ವ ಬಲಿಯಾಗಿದ್ದಾನೆ.
ನೀರಾ ಮಾರಾಟಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ತಾಲ್ಲೂಕಿನ ವಿಟ್ಲೇನಹಳ್ಳಿಯಲ್ಲಿ ಪ್ರದರ್ಶನ ನಡೆಸುತ್ತಿದ್ದ ರೈತರ ಗುಂಪು ಹಿಂಸಾಚಾರದಲ್ಲಿ ತೊಡಗಿದಾಗ ಪೊಲೀಸರು ಗೋಲಿಬಾರ್ ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಗುಂಡೇಟಿಗೆ ಓರ್ವ ಬಲಿಯಾದರೆ, ಇತರ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ನೀರಾ ಇಳಿಸುವ ರೈತರನ್ನು ಸೋಮವಾರ ಪೊಲೀಸರು ಬಂಧಿಸಿದ್ದರಿಂದ ತಾಲ್ಲೂಕಿನಲ್ಲಿ ಬಿಗು ಪರಿಸ್ಥಿತಿ ಮೂಡಿದೆ. ಸೋಮವಾರ ಉದ್ರಿಕ್ತ ರೈತರು ಸರ್ಕಾರಿ ಬಸ್ಸೊಂದನ್ನು ಸುಟ್ಟುಹಾಕಿದ್ದರು ಹಾಗೂ ಪೊಲೀಸರು ಮತ್ತು ರೈತರ ನಡುವೆ ನಡೆದ ಜಟಾಪಟಿಯಲ್ಲಿ 22 ಮಂದಿ ಗಾಯಗೊಂಡಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, October 9, 2001, 5:30 [IST]