ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಾಪುರದಲ್ಲಿ ಮೂರು ಎಳೆಜೀವ ಹೊತ್ತೊಯ್ದ ಯದ್ವಾತದ್ವ ಸುರಿದ ಮಳೆ

By Staff
|
Google Oneindia Kannada News

ಬಿಜಾಪುರ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಂಡಿ ತಾಲ್ಲೂಕಿನ ಮೂವರು ನತದೃಷ್ಟರು ಬಲಿಯಾಗಿದ್ದಾರೆ.

ಲೋನಿ ಹಳ್ಳಿಯಲ್ಲಿ ಮನೆಯಾಂದು ಕುಸಿದ ಪರಿಣಾಮವಾಗಿ ಮೂವರು ಮಕ್ಕಳು ಅಸುನೀಗಿದ್ದಾರೆ. ಮನೆಯಲ್ಲಿದ್ದ ಇತರ ಇಬ್ಬರು ಮಹಿಳೆಯರಿಗೆ ಕೂಡ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಜಿಲ್ಲೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಬಹಳ ಕಾಲದ ನಂತರ ಬಂದಿರುವ ಮಳೆಯಿಂದಾಗಿ ಹೊಳೆಗಳು ತುಂಬಿ ಹರಿಯುತ್ತಿವೆ.

ಕೆರೆ ಕಾಲುವೆಗಳೂ ಭರ್ತಿಯಾಗಿದ್ದು ರೈತರು ಸಂತೋಷಗೊಂಡಿದ್ದರೆ, ಕೆಲವು ಪ್ರದೇಶಗಳಲ್ಲಿ ಮಾತ್ರ ನೀರು ಹರಿದುಹೋಗುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೊಯ್ತಾಲ್‌ ಹಳ್ಳಿ ಎಂಬಲ್ಲಿ ನೂರಕ್ಕೂ ಹೆಚ್ಚು ಮನೆಯಾಳಗೆ ನೀರು ನುಗ್ಗಿದೆ. ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ಕೆಲಸ ಭರದಿಂದ ಸಾಗಿದೆ.

ಬಿಜಾಪುರ, ಹೂವಿನ ಹಡಗಲಿ, ಹಿಪ್ಪರಗಿ, ಬಸವನ ಬಾಗೇವಾಡಿ, ಮದ್ದೇ ಬಿಹಾಳ ಮತ್ತು ಇಂಡಿ ತಾಲೂಕುಗಳಲ್ಲಿ ಭಾನುವಾರ 10 ಸೆಂಟಿಮೀಟರ್‌ಗೂ ಹೆಚ್ಚು ಅಧಿಕ ಮಳೆ ದಾಖಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X