ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿಂದುಳಿದ ವರ್ಗಗಳ ಹುದ್ದೆ ತುಂಬುವ ಕುರಿತು ಸದ್ಯದಲ್ಲೇ ಅಧಿಸೂಚನೆ
ಬೆಂಗಳೂರು: ಹಿಂದುಳಿದ ವರ್ಗಗಳ ಹುದ್ದೆಗಳನ್ನು ತುಂಬುವ ಕುರಿತು ನೀತೆ ಸಂಹಿತೆಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಮುಂದಿನ ತಿಂಗಳು ಹೊರಡಿಸಲಿದ್ದು , ಆನಂತರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಮಾಜ ಕಲ್ಯಾಣ ಮತ್ತು ತೋಟಗಾರಿಕೆ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಎ ಹಾಗೂ ಬಿ ವರ್ಗದ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಮೂಲಕ ತುಂಬಲು ನಿರ್ಧರಿಸಲಾಗಿದ್ದು , ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ನೇರ ನೇಮಕಾತಿ ಪ್ರಕ್ರಿಯೆ ಮೂಲಕ ತುಂಬಲಾಗುವುದು. ಮೂರು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವುದು ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು ಹೇಳಿದರು.
15 ಸಾವಿರ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬುವ ಕುರಿತು ಸರ್ಕಾರ ಜನತೆಯಿಂದ ತಕರಾರುಗಳನ್ನು ಆಹ್ವಾನಿಸಿದ್ದು, ಈ ಕುರಿತು ಹಲವಾರು ದೂರುಗಳು ಬಂದಿವೆ ಎಂದು ಪ್ರಶ್ನೆಯಾಂದಕ್ಕೆ ಸಚಿವರು ಉತ್ತರಿಸಿದರು.
(ಪಿಟಿಐ)
Comments
Story first published: Friday, October 5, 2001, 5:30 [IST]