ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಬ್ಬಿನಾಲೆ ರಕ್ಷಿತಾರಣ್ಯದಲ್ಲಿ ಗಾಂಜಾ ಬೆಳೆ ಜೊತೆ 22 ನಾಡಬಾಂಬ್ ಪತ್ತೆ
ಪುತ್ತೂರು: ಶಿರಾಡಿ ಗ್ರಾಮದ ಕಬ್ಬಿನಾಲೆ ರಕ್ಷಿತಾರಣ್ಯದ ಕುರ್ಸಿಗುಡ್ಡೆಯ ಗಾಂಜಾ ತೋಟದ ಶೆಡ್ನಲ್ಲಿ 22 ನಾಡಬಾಂಬ್ಗಳು ಪತ್ತೆಯಾಗಿವೆ.
ಅರಣ್ಯ ಇಲಾಖೆಯವರು ಗಾಂಜಾ ಪತ್ತೆಗಾಗಿ ದಾಳಿನಡೆಸಿದಾಗ ಆರೋಪಿಗಳು ಸುಮಾರು 2,500 ಹೊಂಡಗಳಲ್ಲಿ ನೆಡಲಾಗಿದ್ದ ಗಾಂಜಾ ಗಿಡಗಳನ್ನು ನಾಶ ಮಾಡಿ ಪರಾರಿಯಾಗಿದ್ದರು. ಗಾಂಜಾ ಬೆಳೆದ ಪ್ರದೇಶದಲ್ಲಿದ್ದ ಶೆಡ್ ಒಂದರಲ್ಲಿ 22 ನಾಡ ಬಾಂಬ್ಗಳು ಪತ್ತೆಯಾಗಿವೆ.
ಗಾಂಜಾ ಬೆಳೆಗಾರರು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ನಾಡ ಬಾಂಬ್ಗಳನ್ನು ಸಂಗ್ರಹಿಸಿಟ್ಟಿದ್ದರು ಎಂದು ಹೇಳಲಾಗುತ್ತಿದ್ದರೂ, ಗಾಂಜಾ ಬೆಳೆದಿರುವ ಆರೋಪಿಗಳು ಕೇರಳ ಮೂಲದವರಾದ್ದರಿಂದ ಈ ಪ್ರಕರಣ ಸಾಕಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.
(ಇನ್ಫೋ ವಾರ್ತೆ)
Comments
Story first published: Friday, October 5, 2001, 5:30 [IST]