Get Updates
Get notified of breaking news, exclusive insights, and must-see stories!

‘ಅಬ್ಕಾರಿಸಿಬ್ಬಂದಿ ಇರುವುದು ದೊರೆಮನೆ ಕಾವಲು ಕಾಯಲಿಕ್ಕಲ್ಲ’

ಬೆಂಗಳೂರು : ನೀರಾವನ್ನು ಅಮೃತ ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಇದನ್ನು ತಡೆಯಲು ರಾಜ್ಯ ಸರಕಾರಕ್ಕೆ ಯಾವುದೇ ಹಕ್ಕಿಲ್ಲ ಎಂದು ರಾಜ್ಯ ರೈತ ಸಂಘ ಹೇಳಿದೆ.

ರೈತ ಸಂಘದ ಅಧ್ಯಕ್ಷ ಪ್ರೊ. ನಂಜುಂಡ ಸ್ವಾಮಿ ಗುರುವಾರದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ನೀರಾಕ್ಕೆ ಅಮೃತ ಎಂಬ ಟ್ರೇಡ್‌ ಮಾರ್ಕ್‌ ಬಳಸಲು ನಿರ್ಧರಿಸಲಾಗಿದೆ. ಇದು ಮದ್ಯ ಅಲ್ಲ. ರಾಜ್ಯ ಸರಕಾರ ಅಬ್ಕಾರಿ ಕಾಯ್ದೆಯಡಿ ನೀರಾವನ್ನು ಸೇರಿಸಿರುವುದು ತಪ್ಪು ಎಂದು ಸರಕಾರದ ಕ್ರಮವನ್ನು ಟೀಕಿಸಿದರು.

ನೀರಾವನ್ನು ಶುದ್ಧ ಮೂಲರೂಪದಲ್ಲಿಯೇ ಆರು ತಿಂಗಳು ಕಾಲ ಕಾಪಾಡಿಕೊಂಡು ಬರಬಹುದು ಎಂದಾದ ಮೇಲೆ ಅದು ಮದ್ಯ ಹೇಗಾಗುತ್ತದೆ ಎಂದು ಸ್ವಾಮಿ ಪ್ರಶ್ನಿಸಿದರು. ನೀರಾ ಹೆಸರಿನಲ್ಲಿ ಅಮಲು ರಾಸಾಯನಿಕ ಬೆರೆಸಿ ಮಾರಾಟ ಮಾಡಲು ಅವಕಾಶವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೀರಾವನ್ನು ಸರಕಾರ ನಿಷೇಧಿಸಿರುವುದನ್ನು ಪ್ರಸ್ತಾಪಿಸಿ, ಅಬ್ಕಾರಿ ಇಲಾಖೆ ಇರುವುದೇ ಇಂತಹ ಅಪರಾಧಗಳನ್ನು ಪತ್ತೆ ಹಚ್ಚುವುದಕ್ಕೆ. ದೊರೆಗಳ ಮನೆಯ ಕಾವಲು ಕಾಯುವುದಕ್ಕಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಟ್ರೇಡ್‌ ಮಾರ್ಕ್‌ ಆಗಲೀ ಟ್ರೇಡ್‌ ನೇಮ್‌ಗಳಾಗಲೀ ಇಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದನ್ನು ತಡೆಯುವ ಪ್ರಯತ್ನವನ್ನೇಕೆ ಸರಕಾರ ಮಾಡುತ್ತಿಲ್ಲ ಎಂದ ನಂಜುಂಡ ಸ್ವಾಮಿ ಅವರು, ಅಮೃತ ಬ್ರಾಂಡ್‌ನಡಿ ಮಾರಾಟವಾಗುವ ನೀರಾದ ಬೆಲೆ ವಿವರಗಳನ್ನೂ ತಿಳಿಸಿದರು. ಒಂದು ಲೀಟರ್‌ ನೀರಾ ಬೆಲೆ 40 ರೂಪಾಯಿ. 200 ಮತ್ತು 300 ಮಿ.ಲೀ.ನ ಬಾಟಲಿಗಳಲ್ಲಿ ನೀರಾ ಮಾರಾಟ ಮಾಡಲಾಗುವುದು ಎಂದು ವಿವರಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+