ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೌರಿಬಿದನೂರು ತಾಲ್ಲೂಕಿನಲ್ಲಿ ವಾಂತಿ- ಭೇದಿ : 3 ಸಾವು
ಗೌರಿಬಿದನೂರು : ತಾಲ್ಲೂಕಿನಲ್ಲಿ ತೀವ್ರ ವಾಂತಿ-ಭೇದಿಯಿಂದ ಮೂವರು ಮೃತಪಟ್ಟಿದ್ದು, 19 ಮಂದಿ ಹಾಸಿಗೆ ಹಿಡಿದಿದ್ದಾರೆ.
ವೆಂಕಟಾಪುರ ಮತ್ತು ಡಿ.ಪಾಳ್ಯದ ಲಕ್ಷ್ಮಮ್ಮ (85), ನರಸಿಂಹಯ್ಯ (65) ಹಾಗೂ ಅಬ್ದುಲ್ ಗಫಾರ್ (45) ಮೃತಪಟ್ಟವರೆಂದು ಆರೋಗ್ಯ ಇಲಾಖೆ ತಿಳಿಸಿದೆ. ಅಸ್ವಸ್ಥರಾದವರನ್ನು ಬೆಂಗಳೂರು ಮತ್ತು ಹಿಂದೂಪುರ ಆಸ್ಪತ್ರೆಗೆ ಸೇರಿಸಲಾಗಿದೆ.
ಕುಡಿಯುವ ನೀರು ಹರಿದು ಬರುವ ಪೈಪ್ ಒಡೆದಿದ್ದು, ಅದಕ್ಕೆ ಕೊಳಚೆ ನೀರು ಸೇರುತ್ತಿರುವುದರಿಂದ ಜನರ ಮೇಲೆ ಅನಾರೋಗ್ಯದ ದಾಳಿ ನಡೆಯುತ್ತಿದೆ ಎಂದು ಸ್ಥಳೀಯರು ಹಾಗೂ ವೈದ್ಯಾಧಿಕಾರಿಗಳು ಹೇಳಿದ್ದಾರೆ. ನಾಮಂಗೊಂಡ್ಲು ಮತ್ತು ತೊಂಡೇಬಾವಿ ಗ್ರಾಮಗಳ ಆರೋಗ್ಯಕೇಂದ್ರಗಳ ವೈದ್ಯಾಧಿಕಾರಿಗಳು ವಾಂತಿ- ಭೇದಿ ಕಾಣಿಸಿಕೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Friday, October 5, 2001, 5:30 [IST]