ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಣಂಬೂರು ಬೀಚ್‌ನಲ್ಲಿ ಬೆಂಗಳೂರಿನ ನಾಲ್ವರು ವಿದ್ಯಾರ್ಥಿಗಳು ನೀರು ಪಾಲು

By Staff
|
Google Oneindia Kannada News

ಮಂಗಳೂರು : ಪಣಂಬೂರು ಬೀಚ್‌ನಲ್ಲಿ ಈಜಾಡುತ್ತಿದ್ದ ಬೆಂಗಳೂರು ನಗರದ ನಾಲ್ಕು ಮಂದಿ ವಿದ್ಯಾರ್ಥಿಗಳು ಸಮುದ್ರ ಪಾಲಾಗಿರುವ ದುರಂತ ಬುಧವಾರ ನಡೆದಿದೆ.

ಮೃತಪಟ್ಟ ನಾಲ್ವರಲ್ಲಿ ಅರುಣ(19) ಮತ್ತು ಯಶವಂತ(19) ಎಂಬಿಬ್ಬರ ದೇಹ ಪತ್ತೆಯಾಗಿದೆ. ಅನೋಜ್‌ ಖಾತ್ರಿ (19)ಮತ್ತು ವಸಂತಕುಮಾರ್‌ (19) ನಾಪತ್ತೆಯಾಗಿದ್ದಾರೆ. ಉಲ್ಲಾಸ್‌(19) ಎಂಬಾತ ಹೆಚ್ಚು ನೀರು ಕುಡಿದಿರುವುದರಿಂದ ಆತನನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಸಿಎ(ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌) ಓದುತ್ತಿರುವ 37 ಮಂದಿ ವಿದ್ಯಾರ್ಥಿಗಳ ತಂಡ ಐವರು ಶಿಕ್ಷಕರ ಜೊತೆ ಪ್ರವಾಸಕ್ಕೆಂದು ನಗರಕ್ಕೆ ಆಗಮಿಸಿತ್ತು. ಸಮುದ್ರದಲ್ಲಿ ಈಜಾಡುತ್ತಿದ್ದ ಸಂದರ್ಭದಲ್ಲಿ ದೊಡ್ಡ ತೆರೆಯಾಂದು ಅನಿರೀಕ್ಷಿತವಾಗಿ ದಡವನ್ನು ಅಪ್ಪಳಿಸಿದಾಗ ಮೂವರು ಹುಡುಗಿಯರು ಸೇರಿದಂತೆ ಒಟ್ಟು ಹನ್ನೆರಡು ಮಂದಿ ವಿದ್ಯಾರ್ಥಿಗಳು ತೆರೆಯಲ್ಲಿ ಕೊಚ್ಚಿ ಹೋದರು. ಸಮೀಪದಲ್ಲಿಯೇ ಮಿನು ವ್ಯಾಪಾರ ನಡೆಸುತ್ತಿದ್ದವರು ಏಳುಮಂದಿಯನ್ನು ರಕ್ಷಿಸಿದ್ದರೂ ಉಳಿದ ನಾಲ್ವರನ್ನು ಬಚಾವ್‌ ಮಾಡುವುದು ಸಾಧ್ಯವಾಗಲಿಲ್ಲ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X